ತಂದೆ ವಾಮಾಚಾರ ಕೃತ್ಯಕ್ಕೆ ಚಿತಾಗಾರದಿಂದ ಮೃತದೇಹದ ತಲೆ ಕದ್ದ

Public TV
1 Min Read

ಲಕ್ನೋ: ಚಿತಾಗಾರದಲ್ಲಿ ಹೊತ್ತಿ ಉರಿಯುತ್ತಿದ್ದ ಮೃತದೇಹದ ತಲೆಯನ್ನು ವ್ಯಕ್ತಿಯೊಬ್ಬ ತನ್ನ ಸಹಚರರೊಂದಿಗೆ ಹೊರತೆಗೆದಿರುವ ಘಟನೆ ಶಹಜಹಾನ್‍ಪುರದಲ್ಲಿ ನಡೆದಿದೆ.

ಪ್ರಮುಖ ಆರೋಪಿಯನ್ನು ಉಪೇಂದ್ರ ಎಂದು ಗುರುತಿಸಲಾಗಿದ್ದು, ಇದೀಗ ಆತನನ್ನು ಪೊಲೀಸರು ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ಆರೋಪಿ ತಂದೆ ವಾಮಾಚಾರಿಯಾಗಿದ್ದು, ಅವರಿಗೆ ವಾಮಾಚಾರ ಮಾಡಲು ತಲೆಯ ಅಗತ್ಯವಿತ್ತು. ಹಾಗಾಗಿ ತಲೆ ಕದ್ದಿರುವುದಾಗಿ ಆರೋಪಿ ತಿಳಿದುಬಂದಿದೆ. ಇದನ್ನೂ ಓದಿ: ಅಂಬುಲೆನ್ಸ್‌ನಲ್ಲಿ ಮೃತದೇಹ ಹೊತ್ತು ಹೋಗುತ್ತಿದ್ದ ಸಂಬಂಧಿಕರು ಆಸ್ಪತ್ರೆ ಪಾಲು

ಬಹುದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕುಬೇರ್ ಗಂಗ್ವಾರ್(60) ಅವರು ಸೋಮವಾರ ಸಾವನ್ನಪ್ಪಿದ್ದರು. ಮಂಗಳವಾರ ಮಧ್ಯಾಹ್ನ ಅವರ ಅಂತ್ಯಕ್ರಿಯೆಯನ್ನು ನಡೆಸಲಾಯಿತು. ಈ ವೇಳೆ ಚಿತಾಗಾರದಲ್ಲಿ ಬೆಂಕಿ ಕಡಿಮೆಯಾಗುತ್ತಿದ್ದಂತೆ ಉಪೇಂದ್ರ ತನ್ನ ಸಹಚರರೊಂದಿಗೆ ಸೇರಿ ಮೃತ ವ್ಯಕ್ತಿಯ ತಲೆಯನ್ನು ಚಿತಾಗಾರದಿಂದ ಹೊರತೆಗೆದಿದ್ದಾನೆ ಎಂದು ಗ್ರಾಮಾಂತರ ಎಸ್‍ಪಿ ಸಂಜೀವ್ ಬಾಜಪೈ ತಿಳಿಸಿದ್ದಾರೆ. ಸದ್ಯ ಈ ಸಂಬಂಧ ತನಿಖೆ ನಡೆಸಲಾಗುತ್ತಿದ್ದು, ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *