ಮರ್ಮಾಂಗಕ್ಕೆ ಹೊಡೆದು ವ್ಯಕ್ತಿ ಕೊಲೆ ಪ್ರಕರಣ: ಆರೋಪಿ ಬಂಧನ

Public TV
0 Min Read

ಮೈಸೂರು: ಮರ್ಮಾಂಗಕ್ಕೆ ಹೊಡೆದು ವ್ಯಕ್ತಿಯೊಬ್ಬನ ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶ್ವಸಿಯಾಗಿದ್ದಾರೆ.

23 ವರ್ಷದ ನಂದೀಶ್ ಬಂಧಿತ ಆರೋಪಿ. ಬುಧವಾರ ನಂದೀಶ್ ಬನ್ನೂರಿನ ಬೇವಿಮನಹಳ್ಳಿ ಗ್ರಾಮದಲ್ಲಿ ಕೃಷ್ಣ ಎಂಬವರ ಮರ್ಮಾಂಗಕ್ಕೆ ಹಲ್ಲೆ ಮಾಡಿ ಕೊಲೆ ಮಾಡಿದ್ದನು. ಹಣಕಾಸಿನ ವಿಚಾರಕ್ಕೆ ಸಂಬಂಧಪಟ್ಟಂತೆ ಕೃಷ್ಣ ಮತ್ತು ನಂದೀಶ್ ನಡುವೆ ಗಲಾಟೆಯಾಗಿತ್ತು.

ಬುಧವಾರ ಕೃಷ್ಣರಿಗೆ ಫೋನ್ ಮಾಡಿದ್ದ ನಂದೀಶ್ ಹಣ ನೀಡುವುದ್ದಾಗಿ ಹೇಳಿ ಕರೆಸಿಕೊಂಡು ಕೊಲೆ ಮಾಡಿದ್ದನು. ಕೊಲೆಯ ನಂತರ ನಂದೀಶ್ ನಾಪತ್ತೆಯಾಗಿದ್ದನು. ಈ ಸಂಬಂಧ ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *