ವಿಧವೆಯನ್ನು ಮದ್ವೆಯಾಗಿ ಕೈ ಕೊಟ್ಟ ಆರೋಪ- ನ್ಯಾಯ ಕೇಳಲು ಬಂದ ಮಹಿಳೆಯನ್ನು ಮನೆಯಿಂದ ತಳ್ಳಿದ್ರು

Public TV
1 Min Read

ಮಡಿಕೇರಿ: ಮದುವೆಯಾಗಿ ಕೈಕೊಟ್ಟ ಯುವಕನ ಮನೆಗೆ ನುಗ್ಗಿ ಮಹಿಳೆ ನ್ಯಾಯ ಕೇಳಲು ಬಂದಾಗ ಆಕೆಯನ್ನು ಮನೆಯಿಂದ ಹೊರತಳ್ಳಿ ಬಾಗಿಲು ಹಾಕಿಕೊಂಡಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೂಡ್ಲೂರು ಬಳಿ ನಡೆದಿದೆ.

ಯಮುನಾ ಮೋಸಕ್ಕೊಳ್ಳಗಾದ ಮಹಿಳೆ. ಯಮುನಾ ಅವರನ್ನು ರಾಜೇಶ್ ಎಂಬಾತ ಕೆಲವು ತಿಂಗಳ ಹಿಂದೆ ಮದುವೆಯಾಗಿದ್ದನು. ಮದುವೆ ನಂತರ ರಾಜೇಶ್ ಸಂಸಾರ ಕೂಡ ನಡೆಸಿದ್ದು, ಈಗ ಮನೆಯಲ್ಲಿ ತೋರಿಸಿರುವ ಮತ್ತೊಬ್ಬ ಯುವತಿಯನ್ನು ಮದುವೆ ಆಗುತ್ತಿದ್ದಾನೆ ಎಂದು ಯಮುನಾ ಆರೋಪಿಸುತ್ತಿದ್ದಾರೆ.

ಪತಿ ಬೇರೆ ಮದುವೆ ಆಗುತ್ತಿರುವ ವಿಷಯ ತಿಳಿದ ಯಮುನಾ ತನ್ನ ಕುಟುಂಬಸ್ಥರೊಂದಿಗೆ ರಾಜೇಶ್ ಮನೆಗೆ ಆಗಮಿಸಿದ್ದಾರೆ. ಮನೆಯಲ್ಲಿ ಸಿಕ್ಕಿ ಬಿದ್ದ ಪತಿಗೆ ಮೊದಲಿಗೆ ಯಮುನಾ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಎರಡು ಕುಟುಂಬಗಳ ನಡುವೆ ಜಟಾಪಟಿ ನಡೆದಿದ್ದು, ಕೊನೆಗೆ ರಾಜೇಶ್ ಕುಟುಂಬಸ್ಥರು ಯಮುನಾರನ್ನು ಮನೆಯಿಂದ ಹೊರತಳ್ಳಿ ಬಾಗಿಲು ಹಾಕಿಕೊಂಡಿದ್ದಾರೆ.

ರಾಜೇಶ್ ಹೇಳೋದೇನು?: ಯಮುನಾ ನಮಗೆ ದೂರದ ಸಂಬಂಧಿಯಾಗಿದ್ದು, ಮನೆಗೆ ಬರುತ್ತಿದ್ದಳು. ಸುಮಾರು ಆರು ತಿಂಗಳ ಹಿಂದೆ ನಾನು ನಶೆಯಲ್ಲಿದ್ದಾಗ ಯಮುನಾ ಗೆಳತಿ ಫೋಟೋ ತೆಗೆದುಕೊಳ್ಳುವಂತೆ ಒತ್ತಾಯ ಮಾಡಿದ್ದಳು. ನಾನು ಕುಡಿದ ಮತ್ತಿನಲ್ಲಿ ಆವರು ಹೇಳಿದ ಹಾಗೆ ನಿಂತು ಫೋಟೋ ತೆಗೆಸಿಕೊಂಡಿದ್ದು ಬಿಟ್ಟರೆ ನಾನು ಯಮುನಾಳನ್ನು ಮದುವೆನೂ ಆಗಿಲ್ಲ, ಸಂಸಾರವನ್ನೂಸ ನಡೆಸಿಲ್ಲ. ಕಳೆದ ಒಂದೆರೆಡು ತಿಂಗಳಿನಿಂದ ಯಮುನಾ ನನ್ನನ್ನು ಮದುವೆ ಆಗಬೇಕೆಂದು ಬ್ಲ್ಯಾಕ್ ಮೇಲ್ ಮಾಡ್ತಾಯಿದ್ದಾಳೆ ಅಂತಾ ರಾಜೇಶ್ ಹೇಳಿದ್ದಾನೆ.

ರಾಜೇಶ್ ಕುಟುಂಬಸ್ಥರು ಯಮುನಾರನ್ನು ಮನೆಯಿಂದ ಹೊರ ತಳ್ಳಿದಾಗ ಕೆಳಗೆ ಬಿದ್ದ ಯಮುನಾ ತಲೆಗೆ ಗಾಯವಾಗಿದ್ದು, ಕುಶಾಲನಗರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ನ್ಯಾಯಕ್ಕಾಗಿ ಆಗ್ರಹಿಸಿ ಯಮುನಾ ಕುಶಾಲನಗರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದ್ರೆ ಪೊಲೀಸರು ರಾಜೇಶ್ ಪರವಾಗಿ ಇದ್ದಾರೆ ಅಂತಾ ಯಮುನಾ ಆರೋಪ ಮಾಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *