ಜ್ಯಾಕೆಟ್ ಕೊಡೋ ಎಂದಿದ್ದಕ್ಕೆ ಸ್ನೇಹಿತನನ್ನು ಕೊಂದೇಬಿಟ್ಟ

Public TV
1 Min Read

ನವದೆಹಲಿ: ಜ್ಯಾಕೆಟ್ ವಿಚಾರಕ್ಕೆ ಇಬ್ಬರು ಸ್ನೇಹಿತರ ಮಧ್ಯೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರೋ ಘಟನೆ ದೆಹಲಿಯಲ್ಲಿ ನಡೆದಿದೆ.

ಇಲ್ಲಿನ ಆನಂದ್ ವಿಹಾರ್ ಇಂಟರ್ ಸ್ಟೇಟ್ ಬಸ್ ಟರ್ಮಿನಲ್‍ನಲ್ಲಿ ಸೋಮವಾರ ಸಂಜೆ 5 ಗಂಟೆ ವೇಳೆಗೆ 27 ವರ್ಷದ ಬಲ್‍ಬೀರ್ ತನ್ನ ಸ್ನೇಹಿತನೊಂದಿಗೆ ಬಂದಿದ್ದ. ಬಲ್‍ಬೀರ್ ಉತ್ತರಪ್ರದೇಶಕ್ಕೆ ಹೋಗಲು ಬಸ್ ಹಿಡಿಯಬೇಕಿತ್ತು. ಹೀಗಾಗಿ ಸ್ನೇಹಿತ ಶಂಕರ್(29) ಬಲ್‍ಬೀರ್ ನನ್ನು ಡ್ರಾಪ್ ಮಾಡಲು ಬಂದಿದ್ದ.

ಸಾಂದರ್ಭಿಕ ಚಿತ್ರ

ಜ್ಯಾಕೆಟ್ ಕೊಡೋ ಎಂದಿದ್ದಕ್ಕೆ ಜಗಳ: ಬಸ್ ನಿಲ್ದಾಣದಿಂದ ಹೊರಡುವ ಮುನ್ನ ಬಲ್‍ಬೀರ್ ಶಂಕರ್ ನ ಜ್ಯಾಕೆಟ್ ಕೇಳಿದ್ದ. ಆದ್ರೆ ಶಂಕರ್ ಜ್ಯಾಕೆಟ್ ಕೊಡಲು ನಿರಾಕರಿಸಿದ್ದ. ಹೀಗಾಗಿ ಬಲ್‍ಬೀರ್ ಶಂಕರ್ ನನ್ನು ನಿಂದಿಸಲು ಶುರು ಮಾಡಿದ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ನಂತರ ಇಬ್ಬರ ನಡುವೆ ಜಗಳ ತಾರಕಕ್ಕೇರಿದ್ದು, ಶಂಕರ್ ಒಂದು ಕೋಲು ತೆಗೆದುಕೊಂಡು ಬಲ್‍ಬೀರ್ ಗೆ  ಹಲವು ಬಾರಿ ಹೊಡೆದಿದ್ದಾನೆ. ಈ ವೇಳೆ ಬಲ್‍ಬೀರ್ ಕುಸಿದು ಬಿದ್ದಿದ್ದು, ಶಂಕರ್ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಆದ್ರೆ ಸ್ಥಳದಲ್ಲಿದ್ದವರು ಶಂಕರ್ ನನ್ನು ಹಿಡಿದು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.

ಬಲ್‍ಬೀರ್ ನನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದ್ರೂ ಅದಾಗಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ರು ಎಂದು ಪೊಲಿಸರು ಹೇಳಿದ್ದಾರೆ. ಬಲ್‍ಬೀರ್ ಹಾಗೂ ಶಂಕರ್ ಇಬ್ಬರೂ ಪೂರ್ವ ದೆಹಲಿಯ ಘಜೀಪುರ್ ನಿವಾಸಿಗಳು ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *