3ನೇ ಪತ್ನಿಗಾಗಿ 2ನೇ ಪತ್ನಿಯನ್ನ ಕೊಲೆಗೈದ ಪ್ರಕರಣ- ಠಾಣೆಗೆ ನುಗ್ಗಿ ಆರೋಪಿಗೆ ಗ್ರಾಮಸ್ಥರಿಂದ ಥಳಿತ

Public TV
1 Min Read

ಯಾದಗಿರಿ: ಕೊಲೆ ಆರೋಪಿಯಾಗಿ ಜೈಲಿನಲ್ಲಿದ್ದ ವಿನಾಯಕ ಎಂಬವನ ಮೇಲೆ ಹಲ್ಲೆ ನಡೆಸಲು ಗ್ರಾಮಸ್ಥರು ಪೊಲೀಸ್ ಠಾಣೆಗೆ ನುಗ್ಗಿ ಗಲಾಟೆ ನಡೆಸಿದ್ದಾರೆ. ಗಲಾಟೆ ವಿಕೋಪಕ್ಕೆ ತಿರುಗುತ್ತಿದ್ದಂತೆ ಪೊಲೀಸರು ಲಾಠಿ ಚಾರ್ಜ್ ನಡೆಸಿ ವಾತಾವರಣವನ್ನು ತಿಳಿಗೊಳಿಸಿದ್ದಾರೆ.

ಏನಿದು ಗಲಾಟೆ?: ಶುಕ್ರವಾರ ವಿನಾಯಕ್ ರಾಠೋಡ್ ಎಂಬಾತ ತನ್ನ ಎರಡನೇ ಪತ್ನಿ ಅನಿತಾರನ್ನು ಕೊಲೆಗೈದು ಭೀಮಾ ನದಿಯಲ್ಲಿ ಬಿಸಾಡಿದ್ದನು. ಈ ಪ್ರಕರಣದಲ್ಲಿ ವಿನಾಯಕನ ಮೂರನೇ ಹೆಂಡತಿ ಚಾಂಗುಬಾಯಿ ಸಹ ಭಾಗಿಯಾಗಿದ್ದಾಳೆ. ಪೊಲೀಸರು ಆಕೆಯನ್ನು ಸಹ ಬಂಧಿಸಬೇಕೆಂದು ಅನಿತಾಳ ಸಂಬಂಧಿಕರು ಹಾಗು ಗ್ರಾಮಸ್ಥರು ಇಂದು ನಗರದ ಕನಕ ವೃತ್ತದ ವ ಗ್ರಾಮೀಣ ಪೊಲೀಸ್ ಠಾಣೆ ಮುಂದೆ ನೆರೆದಿದ್ದರು.

ಈ ವೇಳೆ ಪೊಲೀಸ್ರು ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ಏರ್ಪಟ್ಟಿದ್ದು, ಉದ್ರಿಕ್ತ ಗ್ರಾಮಸ್ಥರು ಠಾಣೆಯೊಳಗೆ ನುಗ್ಗಿ ಬಂಧಿಖಾನೆಯೊಳಗಿದ್ದ ಆರೋಪಿ ವಿನಾಯಕನ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾರೆ. ಹೀಗಾಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಈ ವೇಳೆ ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.

ಇದನ್ನೂ ಓದಿ: 3ನೇ ಪತ್ನಿಗಾಗಿ 2ನೇ ಪತ್ನಿಯನ್ನ ಕೊಲೆಗೈದ- ಏನಿದು ಪ್ರಕರಣ?

Share This Article
Leave a Comment

Leave a Reply

Your email address will not be published. Required fields are marked *