ಕುಟುಂಬದ ಐವರನ್ನು ಕೊಲೆಗೈದು ಮನೆಗೆ ಬೆಂಕಿ ಹಚ್ಚಿದ..!

Public TV
1 Min Read

ರಾಂಚಿ: ವ್ಯಕ್ತಿಯೊಬ್ಬ ತನ್ನ ಕುಟುಂಬದ ಐವರನ್ನು ಕೊಲೆ ಮಾಡಿದಲ್ಲದೆ ಮನೆಗೆ ಬೆಂಕಿ ಹಚ್ಚಿದ ಅಮಾನವೀಯ ಘಟನೆ ಜಾರ್ಖಂಡ್‍ನ ಸೆರೈಕೇಲಾ ಜಿಲ್ಲೆಯಲ್ಲಿ ನಡೆದಿದೆ.

ಚಿನ್ನು ಸೋರೇನ್(40) ಬಂಧಿತ ಆರೋಪಿ. ಚಿನ್ನು ಶುಕ್ರವಾರ ರಾತ್ರಿ ಕುಡಿದು ತನ್ನ ಪಕ್ಕದ ಮನೆಯಲ್ಲಿ ಇದ್ದನು. ಬಳಿಕ ಇಂದು ಬೆಳಗ್ಗೆ ತನ್ನ ಮನೆಗೆ ತೆರಳಿ ಹಿರಿಯ ಸಹೋದರ ರಬಿ ಮಂಜಿ(45)ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಚಿನ್ನು ತನ್ನ ಸಹೋದರನ ಮೇಲೆ ಹಲ್ಲೆ ಮಾಡಿದ ಬಳಿಕ ತನ್ನ ಅತ್ತಿಗೆ ಪಾರ್ವತಿ(30)ಯನ್ನು ಕೊಲೆ ಮಾಡಿದ್ದಾನೆ. ಅಲ್ಲದೆ ಆಕೆಯ ಮೂವರು ಮಕ್ಕಳಾದ ಜೀತನ್(15), ಸುರೇಶ್(13) ಹಾಗೂ ಪರೇಶ್(11) ನನ್ನು ಕೊಲೆ ಮಾಡಿದ್ದಾನೆ.

ನಂತರ ಆರೋಪಿ ತನ್ನ ತಾಯಿ ಹಾಗೂ ಎರಡನೇ ಸಹೋದರ ಮೇಲೆ ಹಲ್ಲೆ ಮಾಡಿದ್ದಾನೆ. ಸದ್ಯ ಇವರಿಬ್ಬರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿನ್ನು ಮನೆಯವರ ಮೇಲೆ ಹಲ್ಲೆ ಮಾಡಿದ ಬಳಿಕ ಮನೆಗೆ ಬೆಂಕಿ ಹಚ್ಚಿದ್ದಾನೆ ಎಂದು ಪೊಲೀಸ್ ಅಧಿಕಾರಿ ಚಂದನ್ ಕುಮಾರ್ ಸಿನ್ಹಾ ತಿಳಿಸಿದ್ದಾರೆ.

ಪೊಲೀಸರು ಆರೋಪಿ ಚಿನ್ನು ಸೋರೇನ್‍ನನ್ನು ಬಂಧಿಸಿದ್ದಾರೆ. ಗ್ರಾಮಸ್ಥರ ಪ್ರಕಾರ ಆರೋಪಿ ಚಿನ್ನು ಸೋರೇನ್ ಮಾನಸಿಕ ಅಸ್ವಸ್ಥ ಎಂದು ಹೇಳಲಾಗುತ್ತಿದೆ. ಈ ಕೊಲೆಗೆ ನಿಖರ ಕಾರಣ ಏನು ಎಂಬುದು ಅಧಿಕೃತವಾಗಿ ತಿಳಿದು ಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *