ಹುಚ್ಚು ಪ್ರಿಯತಮನಿಂದ ಪ್ರೇಯಸಿಯ ಶಿರಚ್ಛೇದನ

Public TV
1 Min Read

ಭುವನೇಶ್ವರ: ಪ್ರಿಯತಮನೇ ಪ್ರೇಯಸಿಯ ತಲೆ ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಒಡಿಶಾದಲ್ಲಿ ನಡೆದಿದೆ.

ಸಸ್ಮಿತಾ ಬಿಸ್ವಾಲ್ ಪ್ರಿಯತಮನಿಂದಲೇ ಕೊಲೆಯಾದ ಯುವತಿ. ಯುಧಿಸ್ಠಿರ್ ಕೊಲೆ ಮಾಡಿದ ಆರೋಪಿ ಎಂದು ತಿಳಿದು ಬಂದಿದೆ. ಸದ್ಯಕ್ಕೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ತಲೆ ಇಲ್ಲದ ದೇಹವೊಂದು ಭುವನೇಶ್ವರ ಹೊರವಲಯದಲ್ಲಿರುವ ಚಂದಕ ಅರಣ್ಯ ವಿಭಾಗದಲ್ಲಿ ಪತ್ತೆಯಾಗಿತ್ತು. ತನಿಖೆಯ ವೇಳೆ ಮೃತ ಯುವತಿಯನ್ನು ಪುರಿ ಜಿಲ್ಲೆಯ ಸತ್ಯಾಬಾಡಿ ಪ್ರದೇಶದವಳು ಎಂದು ಗುರುತಿಸಲಾಗಿದೆ. ಅಷ್ಟೇ ಅಲ್ಲದೇ ಶೀಘ್ರದಲ್ಲಿಯೇ ಆಕೆಯ ಮದುವೆ ನಿಶ್ಚಯವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಡಿಸೆಂಬರ್ 13 ರಂದು ಸಸ್ಮಿತಾ ಬಿಸ್ವಾಲ್ ನಾಪತ್ತೆಯಾಗಿದ್ದು, ಆಕೆಯ ಕುಟುಂಬದವರು ಪೊಲೀಸರಿಗೆ ನಾಪತ್ತೆಯ ದೂರು ನೀಡಿದ್ದರು. ಬಳಿಕ ತನಿಖೆ ಮಾಡುವಾಗ ಆಕೆಯ ಪ್ರಿಯತಮ ಯುಧಿಸ್ಠಿರ್ ನನ್ನು ಬಂಧಿಸಿ ವಿಚಾರಣೆ ಮಾಡಿದ್ದಾರೆ. ಆಗ ಈ ಪ್ರಕರಣ ಬೆಳಕಿಗೆ ಬಂದಿದೆ.

ಆರೋಪಿ ಯುಧಿಸ್ಠಿರ್ ಪ್ರೇಯಸಿಯ ಮನೆ ಸಮೀಪದ ಏರಿಯಾದಲ್ಲಿ ವಾಸಿಸುತ್ತಿದ್ದು, ಇಬ್ಬರು ಪ್ರೀತಿಸುತ್ತಿದ್ದರು ಎಂದು ತಿಳಿದು ಬಂದಿದೆ. ಆರೋಪಿ ಒಂದು ದಿನ ಸಸ್ಮಿತಾ ಬಿಸ್ವಾಲಾಳನ್ನು ಭುವನೇಶ್ವರಕ್ಕೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿಂದ ಚಂದಕದಲ್ಲಿರುವ ಮಾಲಿಪಾಡ ಅರಣ್ಯ ನೋಡಲು ಹೋಗಿದ್ದಾರೆ. ಆದರೆ ಅಲ್ಲಿ ಇದ್ದಕ್ಕಿದ್ದಂತೆ ಸಸ್ಮಿತಾ ಬಿಸ್ವಾಲ್ ತಪ್ಪಿಸಿಕೊಂಡು ಹೋಗಬಾರದು ಎಂದು ಗಂಟಲನ್ನು ಸೀಳಿ ತಲೆಯನ್ನು ಕತ್ತರಿಸಿರುವುದಾಗಿ ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *