ಹಣಕ್ಕಾಗಿ ಪೀಡಿಸುತ್ತಿದ್ದ ಪ್ರಾಣ ಸ್ನೇಹಿತನನ್ನೇ ಹತ್ಯೆಗೈದ

Public TV
1 Min Read

ಯಾದಗಿರಿ: ಹಣಕ್ಕಾಗಿ (Cash) ಪೀಡಿಸುತ್ತಿದ್ದ ಪ್ರಾಣ ಸ್ನೇಹಿತನನ್ನೇ (Friend) ವ್ಯಕ್ತಿಯೊಬ್ಬ ಹತ್ಯೆಗೈದ ಘಟನೆ ಯಾದಗಿರಿ (Yadgir) ಜಿಲ್ಲೆಯ ಹುಣಸಗಿ ತಾಲೂಕಿನ ಬಲಶೆಟ್ಟಿಹಾಳ ಗ್ರಾಮದಲ್ಲಿ ನಡೆದಿದೆ.

ಮೃತನನ್ನು ರಾಜೇಸಾಬ್ ಎಂದು ಹಾಗೂ ಆರೋಪಿಯನ್ನು ವೀರೇಶ್‌ ಎಂದು ಗುರುತಿಸಲಾಗಿದೆ. ಬಲಶೆಟ್ಟಿಹಾಳ ಗ್ರಾಮದ ರಾಜೇಸಾಬ್ ಹಾಗೂ ವೀರೇಶ್‌ ಇಬ್ಬರು ಕುಚುಕು ಗೆಳೆಯರಾಗಿದ್ದರು. ರಾಜೇಸಾಬ್ ಕಳ್ಳತನವನ್ನೇ ವೃತ್ತಿಯನ್ನಾಗಿಸಿಕೊಂಡಿದ್ದ. ಜೊತೆಗೆ ಈತನಿಗೆ ಕುಡಿತದ ಚಟವೂ ಇತ್ತು. ಈ ಹಿನ್ನೆಲೆಯಲ್ಲಿ ರಾಜೇಸಾಬ್‌ ತನ್ನ ಸ್ನೇಹಿತರಿಗೆ ಹಣ ನೀಡುವಂತೆ ಪೀಡಿಸುತ್ತಿದ್ದ. ಸ್ನೇಹಿತರು ಹಣ ನೀಡದಿದ್ದರೇ ಕಿರುಕುಳ ಕೊಡುತ್ತಿದ್ದ.

ಇತ್ತೀಚೆಗೆ ಕೇಸ್ ಒಂದರಲ್ಲಿ ಜೈಲು ಪಾಲಾಗಿದ್ದ ರಾಜೇಸಾಬ್ ಕಳೆದ 3 ದಿನಗಳ ಹಿಂದೆ ಬೇಲ್ ಮೇಲೆ ಬಿಡುಗಡೆಗೊಂಡು ಊರಿಗೆ ಬಂದಿದ್ದ. ಜೈಲಿನಿಂದ ಹೊರಬಂದ ಮೇಲೆ ರಾಜೇಸಾಬ್, ಸ್ನೇಹಿತ ವೀರೇಶ್‌ನನ್ನು 15 ಸಾವಿರ ರೂ. ಹಣ ಕೊಡುವಂತೆ ಪೀಡಿಸುತ್ತಿದ್ದ. ವೀರೇಶ್‌ ಸ್ನೇಹಿತನಿಗೆ ಸಾಕಷ್ಟು ಬಾರಿ ಹಣ ನೀಡಿ ಸಹಾಯವನ್ನೂ ಮಾಡಿದ್ದ. ಇದನ್ನೂ ಓದಿ: ಮದುವೆಯೊಂದರಲ್ಲಿ 500 ರೂ. ನೋಟುಗಳ ಸುರಿಮಳೆ – ಹಣಕ್ಕಾಗಿ ಮುಗಿಬಿದ್ದ ಜನರು

ರಾಜೇಸಾಬ್ ಹಾಗೂ ವೀರೇಶ್‌ ಶನಿವಾರ ಬಲಶೆಟ್ಟಿಹಾಳ ಗ್ರಾಮದ ಹೊರಹೊಲಯದ ಜಮೀನಿಗೆ ಮದ್ಯಪಾನ ಮಾಡಲು ಹೋಗಿದ್ದರು. ಈ ವೇಳೆ ಹಣದ ವಿಚಾರವಾಗಿ ಇಬ್ಬರ ನಡುವೆ ಹಣಕಾಸಿನ ವಿಚಾರವಾಗಿ ಮಾತಿಗೆ ಮಾತು ಬೆಳೆದು ಗಲಾಟೆ ಆರಂಭವಾಗಿದೆ. ಗಲಾಟೆಯ ಕೋಪದಲ್ಲಿ ಪಕ್ಕದಲ್ಲೇ ಇದ್ದ ಕೊಡಲಿಯಿಂದ ರಾಜಾಸಾಬ್‌ನ ಕುತ್ತಿಗೆ ಮತ್ತು ತಲೆಗೆ ಹೊಡೆದ ವೀರೇಶ್‌ ಕೊಲೆ ಮಾಡಿ ಎಸ್ಕೇಪ್ ಆಗಿದ್ದ. ಘಟನೆ ನಡೆದ 12 ಗಂಟೆಗಳಲ್ಲಿ ಹುಣಸಗಿ ಪೊಲೀಸರು ಆರೋಪಿ ವೀರೇಶ್‌ನನ್ನು ಬಂಧಿಸಿದ್ದು, ಹಣಕಾಸಿನ ವಿಚಾರಕ್ಕೆ ಕುಡಿದ ನಶೆಯಲ್ಲಿ ಕೊಲೆ ಮಾಡಿರೋದಾಗಿ ಪೊಲೀಸರಿಂದ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಇದನ್ನೂ ಓದಿ:  ನನ್ನ ಮೇಲೆ ಹಬ್ಬಿಸ್ತಿರೊ ಸುಳ್ಳು ಆಪಾದನೆಗಳೆಲ್ಲ ವ್ಯವಸ್ಥಿತ ಪಿತೂರಿ: ರೂಪಾಗೆ ರೋಹಿಣಿ ತಿರುಗೇಟು

LIVE TV
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *