ಪತ್ನಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಕ್ಕೆ ಸ್ನೇಹಿತನನ್ನ ಕೊಂದು, ಶವವನ್ನು ಅರಣ್ಯದಲ್ಲಿ ಎಸೆದ

Public TV
1 Min Read

ಚಿಕ್ಕೋಡಿ: ತನ್ನ ಹೆಂಡತಿಯೊಂದಿಗೆ ಅಸಭ್ಯ ವರ್ತನೆ ಮಾಡಿದ್ದ ಸ್ನೇಹಿತನನ್ನು ಹತ್ಯೆ ಮಾಡಿ ಅರಣ್ಯದಲ್ಲಿ ಬೀಸಾಕಿದ ಘಟನೆ ಬೆಳಗಾವಿ (Belagavi) ಜಿಲ್ಲೆಯ ಚಿಕ್ಕೋಡಿ (Chikkodi) ತಾಲೂಕಿನ ಕರೋಶಿ ಗ್ರಾಮದಲ್ಲಿ ನಡೆದಿದೆ.

ಕರೋಶಿ ಗ್ರಾಮದ ಸುನೀಲ್‌ ಮಹಾದೇವ ಸಾಳುಂಕೆ (25) ಮೃತ ಯುವಕ. ಈತನಿಗೆ ಅದೇ ಗ್ರಾಮದ ಮಹಾಂತೇಶ್‌ ತಳವಾರ್‌ ಎಂಬಾತ ಸ್ನೇಹಿತನಾಗಿದ್ದ (Friend). ಆದರೆ ಸುನೀಲ್‌ ತನ್ನ ಪತ್ನಿಯೊಂದಿಗೆ (Wife) ಅಸಭ್ಯವಾಗಿ ವತಿಸಿದ್ದಾನೆಂದು ತಿಳಿದ ಮಹಾಂತೇಶ್‌ ಅಸಭ್ಯವಾಗಿ ವರ್ತಿಸಿದ್ದಾನೆ. ನಂತರ ಆತನನ್ನು ಕೊಲೆ ಮಾಡಲು ಹೊಂಚು ಹಾಕಿದ್ದಾನೆ. ಆ ಪ್ರಕಾರವಾಗಿಯೇ ಸುನೀಲ್‌ನನ್ನು ಆತನ ಬೈಕ್‌ನಲ್ಲೇ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ. ನಂತರ ಮಹಂತೇಶ್‌ ಸಾಕ್ಷಿ ನಾಶ ಮಾಡಲು ಕರೋಶಿ ಗ್ರಾಮದ ಹತ್ತಿರವಿರುವ ಅರಣ್ಯದಲ್ಲಿ ಸುನೀಲ್‌ನ ಶವವನ್ನು ಎಸೆದು ಹೋಗಿದ್ದಾನೆ.

ಇತ್ತ ಒಂದು ವಾರದಿಂದ ನಾಪತ್ತೆಯಾಗಿದ್ದ ಸುನೀಲ್‌ ಸಾಳುಂಕೆ ಶವವಾಗಿ ಪತ್ತೆಯಾಗಿದ್ದರಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಘಟನಾ ಸ್ಥಳಕ್ಕೆ ಚಿಕ್ಕೋಡಿ ಸಿಪಿಐ ಆರ್‌ ಆರ್‌ ಪಾಟೀಲ್, ಪಿಎಸ್ಐ ಯಮನಪ್ಪ ಮಾಂಗ್, ಎಎಸ್ಐ ಎಲ್.ಎಸ್. ಖೋತ್, ಡೆಪ್ಯೂಟಿ ಆರ್‌ಎಫ್ಒ ಶ್ರೀಶೈಲ್ ಬನ್ಸೆ, ಅರಣ್ಯ ಖಾತೆ ಗಾರ್ಡ್ ಮಲಪ್ಪ ಕದಂ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ, ತನಿಖೆ ಕೈ ಗೊಂಡಿದ್ದಾರೆ. ಚಿಕ್ಕೋಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಮಹಾಂತೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಕಚ್ಚಾಟ ಬಿಡಿ, ಎಲೆಕ್ಷನ್ ಗೆಲ್ಲಿಸಿ – ಮುಂದಿನ ಸಿಎಂ ಚರ್ಚೆಗೆ ಬ್ರೇಕ್ ಹಾಕಿದ ರಾಗಾ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *