ಆಸ್ತಿ ವಿಚಾರಕ್ಕೆ ಕಿತ್ತಾಟ – ಕಾರು ಹತ್ತಿಸಿ ಸಹೋದರನನ್ನೇ ಹತೈಗೈದ, ವಿಡಿಯೋ ಲಭ್ಯ

Public TV
1 Min Read

ಶಿವಮೊಗ್ಗ: ಆಸ್ತಿ (Property) ವಿಚಾರಕ್ಕೆ ಫೆ.29 ರಂದು ಸಹೋದರನನ್ನು  ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಕಾರು ಹತ್ತಿಸಿ ಬರ್ಬರವಾಗಿ ಹತ್ಯೆ ಮಾಡುತ್ತಿರುವ ದೃಶ್ಯ ಲಭ್ಯವಾಗಿದೆ.

ಶಿವಮೊಗ್ಗ (Shivamogga) ಜಿಲ್ಲೆ ಸೊರಬ ತಾಲೂಕಿನ ತುಡನೀರು ಗ್ರಾಮದ ನಿವಾಸಿ ರಫೀಕ್‌ (45) ಆಸ್ತಿ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ಕಳೆದ ವರ್ಷ ತನ್ನ ಸಹೋದರನನ್ನು ಕೊಲೆ ಮಾಡಿ ಜೈಲು ಸೇರಿದ್ದ. ಜಾಮೀನಿನ ಮೇಲೆ ರಫೀಕ್ ಜೈಲಿನಿಂದ (Jail) ಹೊರಗಡೆ ಬಂದಿದ್ದ.

 

ಜೈಲಿನಿಂದ ಬಂದ ರಫೀಕ್‌ನ ಮತ್ತೊಬ್ಬ ಸಹೋದರ ಇದಾಯಸ್‌ ಸಾಗರದ ಚಿಪ್ಪಳ್ಳಿಯಲ್ಲಿ ಕೊಲೆ ಮಾಡಿದ್ದ. ರಫೀಕ್ ಮೇಲೆ ಕಾರು ಹತ್ತಿಸಿ ಕೊಲೆ ಮಾಡುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಆನಂದಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದರು. ಘಟನೆಯ ಬಳಿಕ ಆರೋಪಿಗಳು ಪರಾರಿಯಾಗಿದ್ದರು. ಈಗ ಇದಾಯಸ್‌ ಮತ್ತು ಕೃತ್ಯಕ್ಕೆ ಸಹಕಾರ ನೀಡಿದ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: PublicTV Explainer: ಬೆಂಗಳೂರಿಗೆ ಬಂತು ಮೊದಲ ಚಾಲಕ ರಹಿತ ಮೆಟ್ರೋ ರೈಲು – ವಿಶೇಷತೆಗಳು ನಿಮಗೆಷ್ಟು ಗೊತ್ತು?

 

Share This Article