ಹಳೆಯ ವೈಷಮ್ಯ – ವ್ಯಕ್ತಿ ಬರ್ಬರ ಹತ್ಯೆ

Public TV
1 Min Read

ಬೀದರ್: ಹಳೆಯ ವೈಷಮ್ಯದ ಹಿನ್ನೆಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಚಂಡಕಾಪುರ ಗ್ರಾಮದ ಬಳಿ ನಡೆದಿದೆ.

ಹೈದ್ರಾಬಾದ್‍ನಲ್ಲಿ ವಾಸವಾಗಿದ್ದ ಚಂಡಕಾಪುರ ಗ್ರಾಮದ ನಿವಾಸಿ ಆಲೋಕ್ ಜಾಧವ್‌(35)  ಊರಿಗೆ ಬಂದಿದ್ದರು. ವಿಷಯ ತಿಳಿದ ದುಷ್ಕರ್ಮಿಗಳು ಹಳೆಯ ಹಗೆತನದಿಂದ ಮಾರಕಾಸ್ತ್ರಗಳನ್ನು ಬಳಸಿ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಇದನ್ನೂ ಓದಿ: 2 ಗಂಟೆಗಳ ನಿರಂತರ ಕಾರ್ಯಾಚರಣೆಯಲ್ಲಿ ಬದುಕುಳಿದ ಕ್ಯಾಂಟರ್ ಚಾಲಕ 

POLICE JEEP

ಅದೇ ಗ್ರಾಮದ ಆರೋಪಿ ಅಂಬಾದಾಸ್ ಮತ್ತು ಅವರ ಗುಂಪಿನ ಜನರು ಆಲೋಕ್‍ನನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಈ ಕುರಿತು ಮಂಠಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾದ ದುಷ್ಕರ್ಮಿಗಳಿಗಾಗಿ ಪೊಲೀಸರು ಬಲೆ ಬಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *