ಮಹಿಳೆಯೊಂದಿಗೆ ಮೋಜು ಮಸ್ತಿ ನಡೆಸಿ 6 ದಿನಗಳ ಬಳಿಕ ಗ್ರಾಮಕ್ಕೆ ಬಂದ ವ್ಯಕ್ತಿಯ ಕೊಲೆ!

Public TV
1 Min Read

ರಾಮನಗರ: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಹಲ್ಲೆಗೊಳಗಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ.

ಕನಕಪುರ ತಾಲೂಕಿನ ಚಂಬಳಿಕೆದೊಡ್ಡಿ ಗ್ರಾಮದ ನಂಜಯ್ಯ ಮೃತ ದುರ್ದೈವಿ. ಮೃತ ನಂಜಯ್ಯ ಅದೇ ಗ್ರಾಮದ ಮಹಿಳೆಯೊಬ್ಬಳ ಜೊತೆ ಅನೈತಿಕ ಸಂಬಂಧ ಹೊಂದಿದ್ದ. ಅಲ್ಲದೇ ಕಳೆದ ತಿಂಗಳು ಆಕೆಯನ್ನು ಕರೆದೊಯ್ದು ಇಬ್ಬರು ಮೋಜು ಮಸ್ತಿ ನಡೆಸಿ ಆರು ದಿನಗಳ ಬಳಿಕ ಗ್ರಾಮಕ್ಕೆ ವಾಪಾಸ್ಸಾಗಿದ್ರು.

ಇದರಿಂದ ಮಹಿಳೆಯ ಪತಿ ಸ್ವಾಮಿ ಕೋಪಗೊಂಡು ಜೂನ್ 9ರಂದು ದಾಳಿ ನಡೆಸಿ ದೊಣ್ಣೆಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ನಂತರ ಹಲ್ಲೆಗೊಳಗಾಗಿದ್ದ ನಂಜಯ್ಯನನ್ನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ನಂಜಯ್ಯ ಸಾವನ್ನಪ್ಪಿದ್ದಾನೆ.

ಈ ಬಗ್ಗೆ ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೂ ತಲೆ ಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *