ಖಾಸಗಿ ಬಸ್ ಹರಿದು ವ್ಯಕ್ತಿ ಸಾವು

Public TV
1 Min Read

ದಾವಣಗೆರೆ: ಪಾದಚಾರಿಯೊಬ್ಬ ರಸ್ತೆ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಆತನ ಮೇಲೆ ಖಾಸಗಿ ಬಸ್ಸೊಂದು ಹರಿದು ಹೋದ ಘಟನೆ ದಾವಣಗೆರೆಯ ಅರುಣಾ ವೃತ್ತದ ಬಳಿ ನಡೆದಿದೆ.

ಚನ್ನಬಸಪ್ಪ (30) ಮೃತ ದುರ್ದೈವಿ. ಚನ್ನಬಸಪ್ಪ ಅವರು ಹೋಟೆಲ್ ಕೆಲಸ ಮಾಡುತ್ತಿದ್ದರು. ನಿನ್ನೆ ರಾತ್ರಿ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಬಸ್ ವೇಗವಾಗಿ ಬಂದು ಅವರ ಮೇಲೆ ಹರಿದು ಹೋಗಿದ್ದು, ಚನ್ನಬಸಪ್ಪ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಪತಿಯನ್ನು ಜೈಲಿನಿಂದ ಹೊರತರಲು ಸಹಾಯ ಮಾಡೋದಾಗಿ ಹೇಳಿ ಮಹಿಳೆಯ ರೇಪ್ ಮಾಡಿದ್ರು!

ಅಪಘಾತದ ನಂತರ ಬಸ್ ಅಲ್ಲೇ ನಿಂತಿದ್ದು, ಅಲ್ಲಿದ್ದ ಜನರು ರೊಚ್ಚಿಗೆದಿದ್ದಾರೆ. ಕೋಪಗೊಂಡ ಸಾರ್ವಜನಿಕರು ಬಸ್ಸಿನ ಗಾಜನ್ನು ಪುಡಿ ಪುಡಿ ಮಾಡಿದ್ದಾರೆ. ಈ  ಸಂಬಂಧ ದಾವಣಗೆರೆ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಎರಡ್ಮೂರು ಬಾರಿ ಸಚಿವರಾದವರು ಈಗ ಸ್ಥಾನ ಬಿಟ್ಟುಕೊಡಲಿ: ರೇಣುಕಾಚಾರ್ಯ ಆಗ್ರಹ

Share This Article
Leave a Comment

Leave a Reply

Your email address will not be published. Required fields are marked *