ಮಾಂಸದ ಅಡುಗೆ ಮಾಡದ್ದಕ್ಕೆ ಪತಿ ಆತ್ಮಹತ್ಯೆ

Public TV
1 Min Read

ಬೆಂಗಳೂರು: ಮಾಂಸದ ಅಡುಗೆ ಮಾಡಲಿಲ್ಲ ಎಂದು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಗಂಗಮ್ಮನಗುಡಿಯ ಕಲಾನಗರದಲ್ಲಿ ನಡೆದಿದೆ.

ರಾಜು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ರಾಜು ಭಾನುವಾರ ಮಧ್ಯಾಹ್ನ ಮಾಂಸದ ಅಡುಗೆ ಮಾಡುವಂತೆ ತನ್ನ ಪತ್ನಿಗೆ ಹೇಳಿ ಹೊರಗೆ ಹೋಗಿದ್ದನು. ಬಳಿಕ ರಾಜು ಕುಡಿದ ಮತ್ತಿನಲ್ಲಿ ಸಂಜೆ ಮನೆಗೆ ಬಂದಾಗ ಹೆಂಡತಿ ಮಾಂಸದ ಅಡುಗೆ ಮಾಡಿರಲಿಲ್ಲ.

ಪತಿ ರಾಜು ಮನೆಗೆ ಬಂದಿದ್ದನು ನೋಡಿ ಪತ್ನಿ ಆಗತಾನೆ ಮಾಂಸ ತರಲು ಹೊರಗೆ ಹೋಗಿದ್ದಳು. ಮನೆಯಲ್ಲಿ ಮಾಂಸದ ಅಡುಗೆ ಮಾಡಿರದ್ದನ್ನು ಗಮನಿಸಿ ರಾಜು ಕೋಪಗೊಂಡು ಕುಡಿದ ಮತ್ತಿನಲ್ಲಿ ಟಿನ್ನರ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಬಗ್ಗೆ ಗಂಗಮ್ಮನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *