ಲಾಡ್ಜ್‌ನ ಶೌಚಾಲಯದಲ್ಲಿ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

Public TV
1 Min Read

ಯಾದಗಿರಿ: ವ್ಯಕ್ತಿಯೊಬ್ಬ ಲಾಡ್ಜ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಯಾದಗಿರಿ ನಗರ ರೈಲ್ವೇ ಸ್ಟೇಷನ್ ಸಮೀಪದ ಸಿದ್ಧೇಶ್ವರ ಲಾಡ್ಜ್‌ನಲ್ಲಿ ನಡೆದಿದೆ.

ಖಾದರ್ ಖಾನ್ (45) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಖಾದರ್ ಖಾನ್ ಬೆಂಗಳೂರಿನ ಬಿದರಕುಪ್ಪೆ ಸಮೀಪದ ಅಡಿಗರಕಲ್ಲಹಳ್ಳಿ ನಿವಾಸಿ ಆಗಿದ್ದು, ನಗರದ ದರ್ಗಾವೊಂದಕ್ಕೆ ಭೇಟಿ ನೀಡಲು ಬಂದಿದ್ದನು.

ಖಾದರ್ ಖಾನ್ ಕಳೆದ ಮೂರು ದಿನಗಳಿಂದ ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದನು. ಬುಧವಾರ ತಡರಾತ್ರಿ ಲಾಡ್ಜ್‌ನ ಶೌಚಾಲಯದ ಕೊಣೆಯಲ್ಲಿ ನೇಣು ಬಿಗಿದುಕೊಂಡಿದ್ದಾನೆ. ಖಾದರ್ ಖಾನ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ವಿಷಯ ತಿಳಿದ ಯಾದಗಿರಿ ನಗರ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *