ಕೆಲಸದಿಂದ ವಜಾಗೊಳಿಸಿದ್ದಕ್ಕೆ ಮೊಬೈಲ್ ಟವರ್ ಏರಿ ಆತ್ಮಹತ್ಯೆ ಬೆದರಿಕೆ ಹಾಕ್ದ!

Public TV
1 Min Read

ರಾಯಚೂರು: ಕೆಲಸದಿಂದ ವಜಾಗೊಳಿಸಿದ್ದಕ್ಕೆ ಮೊಬೈಲ್ ಟವರ್ ಏರಿ ಸಿಬ್ಬಂದಿಯೊರ್ವ ಆತ್ಮಹತ್ಯೆ ಬೆದರಿಕೆ ಹಾಕಿದ ಘಟನೆ ರಾಯಚೂರಿನಲ್ಲಿ ನಡೆದಿದೆ.

ರಾಯಚೂರಿನ ಲಿಂಗಸುಗೂರು ರಸ್ತೆಯಲ್ಲಿನ ಎಸಿಬಿ ಕಚೇರಿ ಎದುರುಗಡೆಯ ಮೊಬೈಲ್ ಟವರ್ ಏರಿ ಯುವಕ ಮೊಯಿನ್ ಸಾಬ್ ಬೆದರಿಸಿದ್ದಾನೆ. ಎಟಿಸಿ ಟವರ್ ಕಂಪನಿಯಲ್ಲಿ 9 ವರ್ಷದಿಂದ ಟೆಕ್ನಿಷನ್ ಆಗಿ ಕೆಲಸ ಮಾಡುತ್ತಿದ್ದ ಯಾದಗಿರಿ ಮೂಲದ ಮೊಯಿನ್ ಸಾಬ್ ನನ್ನ ಏಕಾಏಕಿ ಕಾರಣವಿಲ್ಲದೆ ಕೆಲಸದಿಂದ ತಗೆದು ಹಾಕಲಾಗಿತ್ತು.

ಅಧಿಕಾರಿಗಳ ಕ್ರಮ ಖಂಡಿಸಿ ಮೋಯಿನ್ ಟವರ್ ಹತ್ತಿ ಕುಳಿತಿದ್ದ. ಜೊತೆಗೆ ಸಂಘಟನೆಯೊಂದರ ಕಾರ್ಯಕರ್ತರು ಹಲ್ಲೆ ಮಾಡಿ ಕೆಲಸಕ್ಕೆ ಅಡ್ಡಿಮಾಡಿದ್ದಾರೆ ಎಂದು ಆರೋಪಿಸಿದ್ದಾನೆ. ಎಷ್ಟೇ ಮನವೊಲಿಸಿದರು ಕೆಳಗಿಳಿಯದ ಮೋದಿನ್ ಕೊನೆಗೆ ಮಾಜಿ ಶಾಸಕ ಡಾ. ಶಿವರಾಜ್ ಪಾಟೀಲ್ ಕೆಲಸ ಕೊಡಿಸುವ ಭರವಸೆ ನೀಡಿದ ಮೇಲೆ ಕೆಳಗಿಳಿದಿದ್ದಾನೆ.

ಪಶ್ಚಿಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *