ಚಿತ್ರದುರ್ಗ: ಬಾತ್ರೂಮಲ್ಲೇ (Bathroom) ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಚಿತ್ರದುರ್ಗ (Chitradurga) ಜಿಲ್ಲೆ ಹೊಸದುರ್ಗ (Hosadurga) ತಾಲೂಕಿನ ಹುಣುವಿನಡು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರಾಜೇಂದ್ರ ಶ್ರೀನಿವಾಸ್ (30) ಹತ್ಯೆಗೀಡಾದ ದುರ್ದೈವಿಯಾಗಿದ್ದು, ಬಾತ್ರೂಮಲ್ಲಿ ಸ್ನಾನ ಮಾಡುವ ವೇಳೆ ಮನೆಗೆ ನುಗ್ಗಿರುವ ಮೂವರ ಗುಂಪೊಂದು ಮಾರಕಾಸ್ತ್ರಗಳಿಂದ ರಾಜೇಂದ್ರನನ್ನು ಕೊಚ್ಚಿ ಕೊಲೆಗೈದು ರಕ್ತದ ಕೋಡಿ ಹರಿಸಿದ್ದಾರೆ. ಈ ಸಂಬಂಧ ರಾಜೇಂದ್ರ ಶ್ರೀನಿವಾಸನ ತಾಯಿ ಸುಜಾತಾ ಹೊಸದುರ್ಗ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದನ್ನೂ ಓದಿ: ಆಪರೇಷನ್ ಸಿಂಧೂರದಲ್ಲಿ ಭಾಗಿಯಾಗಿದ್ದ ಮಾತ್ರಕ್ಕೆ ವಿನಾಯ್ತಿ ಇಲ್ಲ: ಪತ್ನಿ ಕೊಂದಿದ್ದ ಕಮಾಂಡೋಗೆ ಸುಪ್ರೀಂ ತರಾಟೆ
ರಾಜೇಂದ್ರ ಕೆಲ ತಿಂಗಳ ಹಿಂದೆ ಕಿರಣಾ ಎಂಬ ಮಹಿಳೆ ಜೊತೆ ಮದುವೆಯಾಗಿದ್ದ. ಈ ವಿಚಾರದಲ್ಲಿ ಆಗಾಗ ಗಲಾಟೆ ನಡೆಯುತ್ತಿತ್ತು. ಆದರೆ ಇಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ರಾಜೇಂದ್ರನ ಮೇಲೆ ದಾಳಿ ನಡೆಸಿದ ಕಿರಣಾಳ ಸಹೋದರ ಸಾಗರ್ ಮತ್ತು ಇಬ್ಬರು ಈ ಕೊಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಮಾವು ಬೆಳೆಗಾರರ ನೆರವಿಗೆ ಧಾವಿಸಿದ ಕೇಂದ್ರ – ಪ್ರತಿ ಕ್ವಿಂಟಲ್ಗೆ 1,616 ರೂ. ದರ ನಿಗದಿ
ಮನಸೋ ಇಚ್ಛೆ ಮಾರಕಾಸ್ತ್ರದಿಂದ ಹೊಡೆದು ಕೊಲೆಗೈದು ಆರೋಪಿಗಳು ಪರಾರಿಯಾಗಿದ್ದಾರೆ. ಸಹೋದರಿ ಕಿರಣಾಳ ಸುದ್ದಿಗೆ ಬರಬೇಡ ಎಂದರೂ ಬಿಡುತ್ತಿಲ್ಲ ಎಂಬ ಆಕ್ರೋಶದಿಂದ ಈ ಕೊಲೆಗೈದಿದ್ದಾರೆಂದು ಆರೋಪಿಸಲಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯನವರೇ ತಪ್ಪಿಯೂ ಕರ್ನಾಟಕವನ್ನು ಡಿಕೆಶಿ ಕೈಗೆ ಕೊಡಬೇಡಿ, ಮಾರಿಕೊಂಡು ಹೋಗ್ತಾರೆ – ಯತ್ನಾಳ್
ಕಿರಣಾ ಈ ಮೊದಲು ಬೇರೊಬ್ಬನ ಜೊತೆ ಮದುವೆ ಆಗಿದ್ದು, ಬಳಿಕ ಕಿರಣಾ ಹಾಗೂ ರಾಜೇಂದ್ರ ಮದುವೆಯಾಗಿದ್ದ ಹಿನ್ನೆಲೆ ಸಾಗರ್ ದ್ವೇಷ ಸಾಧಿಸುತ್ತಿದ್ದ. ಈ ಕೊಲೆಗೆ ಕಿರಣಾಳ ಸೋದರಮಾವ ಕೃಷ್ಣಮೂರ್ತಿ ಕೂಡ ಪ್ರಚೋದಿಸಿದ್ದು, ಸಾಗರ್ ಹಾಗೂ ಇಬ್ಬರು ಅಪರಿಚಿತರಿಂದ ಕೃತ್ಯ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಈ ಆರೋಪಿಗಳನ್ನು ಬಂಧಿಸಿ ರಾಜೇಂದ್ರ ಶ್ರೀನಿವಾಸನ ಸಾವಿಗೆ ನ್ಯಾಯ ಒದಗಿಸುವಂತೆ ಮೃತನ ತಾಯಿ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ರೋಡ್ ರೇಜ್ ಕೇಸ್ – ಮಾಜಿ ಎಂಪಿ ಅನಂತಕುಮಾರ್ ಹೆಗಡೆ ಗನ್ಮ್ಯಾನ್, ಡ್ರೈವರ್ಗೆ ಜಾಮೀನು
ಇನ್ಸ್ಟಾದಲ್ಲಿ ಜಾಲಿ ಜಾಲಿ ಎಂದು ಬರೆದು ವಿಕೃತಿ:
ಇನ್ನು ಕೊಲೆಯ ಬೆನ್ನಲ್ಲೇ ರಾಜೇಂದ್ರ ಶ್ರೀನಿವಾಸ್ ಕೊಲೆಯ ಆರೋಪಿ ಸಾಗರ್ ತನ್ನ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಕೊಲೆಯ ರಕ್ತಸಿಕ್ತ ಫೋಟೊವನ್ನು ಹಾಕಿಕೊಂಡು ವಿಕೃತಿ ಮೆರೆದಿದ್ದಾನೆ. ಕೊಲೆಯಾದ ರಾಜೇಂದ್ರ ಶವದ ಫೋಟೋ ಮೇಲೆ ಜಾಲಿ ಜಾಲಿ ಎಂದು ಬರೆದು ವಿಕೃತಿ ತೋರಿದ್ದು, ಆರೋಪಿ ಸಾಗರ್ ಹಾಗೂ ಮತ್ತೋರ್ವ ಆರೋಪಿ ಮಾರಕಾಸ್ತ್ರ ಹಿಡಿದ ಫೋಟೋ ಶೇರ್ ಮಾಡಿದ್ದಾನೆ. ಈ ಸಂಬಂಧ ಹೊಸದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಶಾಲೆಯಲ್ಲಿ ಆಟವಾಡುತ್ತಿದ್ದ ವೇಳೆ ಹೃದಯಾಘಾತ – ವಿದ್ಯಾರ್ಥಿನಿ ಸಾವು