ಕಡವೆ ಬೇಟೆಯಾಡಿ 80 ಕೆ.ಜಿ ಮಾಂಸ ಬಚ್ಚಿಟ್ಟ ವ್ಯಕ್ತಿ ಅರೆಸ್ಟ್

Public TV
1 Min Read

ಮೈಸೂರು: ಕಡವೆ ಬೇಟೆಯಾಡಿ ಮಾಂಸ ಬಚ್ಚಿಟ್ಟ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮೈಸೂರು ಜಿಲ್ಲೆಯ ಹುಣಸೂರಿನ ಲಕ್ಷ್ಮೀಪುರ ಗ್ರಾಮದ ಆನೆಚೌಕೂರಿನಲ್ಲಿ ಈ ಘಟನೆ ನಡೆದಿದೆ. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಅರಣ್ಯ ವ್ಯಾಪ್ತಿಯಲ್ಲಿ ಸ್ವಾಮಿ ಎಂಬಾತ ಕಡವೆ ಬೇಟೆಯಾಡಿದ್ದಾನೆ.

ಬೇಟೆಯಲ್ಲಿ ಸಿಕ್ಕ 80 ಕೆ.ಜಿ ಕಡವೆ ಮಾಂಸವನ್ನು ತಂಬಾಕಿನ ಬ್ಯಾರಕ್ ನಲ್ಲಿ ಬಚ್ಚಿಟ್ಟಿದ್ದನು. ವಿಷಯ ತಿಳಿದು ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಸ್ವಾಮಿ ಮನೆ ಮೇಲೆ ದಾಳಿ ನಡೆಸಿದೆ. ಅಲ್ಲದೆ ಕಡವೆ ಮಾಂಸ, ತಲೆ, ಒಂದು ಮಚ್ಚು ವಶಕ್ಕೆ ಪಡೆದಿದ್ದಾರೆ. ಆರೋಪಿ ಸ್ವಾಮಿ ಜೊತೆ ಬೇಟೆಯಾಡಲು ತೆರಳಿದ್ದ ಇತರ ನಾಲ್ವರ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *