ಮಲ್ಲಿಕಾರ್ಜುನ ಖರ್ಗೆ ಎರಡನೇ ಅಂಬೇಡ್ಕರ್: ಬಾಬುರಾವ್ ಚಿಂಚನಸೂರ್

Public TV
1 Min Read

ಕಲಬುರಗಿ: ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ನಮಗೆ ಎರಡನೇ ಅಂಬೇಡ್ಕರ್ ಇದ್ದಂತೆ ಎಂದು ಗಡಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಾಬುರಾವ್ ಚಿಂಚನಸೂರ್ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷ ನನಗೆ ತಂದೆ ಇದ್ದಂತೆ. ನಾನು ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ನನಗೆ ಗೆಲ್ಲಿಸಿ ಅಧಿಕಾರ ನೀಡಿದೆ. ನನ್ನ ಮೈಯಲ್ಲಿ ಹರಿಯುವ ಪ್ರತಿಕಣದಲ್ಲಿ ಪಕ್ಷದ ರಕ್ತವಿದೆ. ಆದ್ರೆ ಮಾಧ್ಯಮಗಳಲ್ಲಿ ಮಾತ್ರ ಪಕ್ಷ ಬಿಡುವ ಸುದ್ದಿ ಹರಿದಾಡುತ್ತಿದೆ ಎಂದು ತಿಳಿಸಿದರು.

ನನ್ನ ಹಾಗೂ ಪ್ರಿಯಾಂಕ ಖರ್ಗೆ ಮಧ್ಯೆ ಅಭಿವೃದ್ಧಿ ವಿಷಯದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಇನ್ನು ಮುಂದಿನ ಬಾರಿಯೂ ಸಹ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಶತ ಸಿದ್ಧ. ಅದೇ ರೀತಿ ನಾನೇ ಮಂತ್ರಿಯಾಗುವುದು ಖಚಿತ ಎಂದು ಚಿಂಚನಸೂರ್ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *