ನಟಿ ರಾಗಿಣಿ ಬಾಯ್ ಫ್ರೆಂಡ್ ಬಡಿದಾಟಕ್ಕೆ ರೋಚಕ ತಿರುವು

Public TV
1 Min Read

ಬೆಂಗಳೂರು: ಸ್ಯಾಂಡಲ್‍ವುಡ್ ನಟಿ, ತುಪ್ಪದ ಹುಡ್ಗಿ ರಾಗಿಣಿ ಒಂದು ರೀತಿ ಮುಜಗರಕ್ಕೆ ಒಳಗಾಗಿದ್ದಾರೆ. ಹಾಲಿ ಮತ್ತು ಮಾಜಿ ಬಾಯ್ ಫ್ರೆಂಡ್ ಗಳ ಬಡಿದಾಟ ರಾಗಿಣಿ ಅವರಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಅಷ್ಟುಕ್ಕೂ ಬಡಿದಾಟಕ್ಕೆ ಕಾರಣವಾಗಿದ್ದು ಯಾರು ಅನ್ನೋದನ್ನ ಮಾಜಿ ಪ್ರಿಯಕರ ಶಿವಪ್ರಸಾದ್ ಪೊಲೀಸರ ಮುಂದೆ ರಿವೀಲ್ ಮಾಡಿದ್ದಾರೆ. ಮಾಜಿ ಪ್ರಿಯಕರನ ಹೇಳಿಕೆ ತುಪ್ಪದ ಹುಡ್ಗಿಗೆ ಮತ್ತಷ್ಟು ತಲೆನೋವು ತರಿಸಿದೆ.

ಘಟನೆ ಬಳಿಕ ಹಾಲಿ ಲವರ್ ರವಿ ಎಂಬವರು ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಶಿವಪ್ರಕಾಶ್ ವಿರುದ್ಧ ಕೇಸ್ ದಾಖಲಿಸಿದ್ದರು. ಪೊಲೀಸರು ಶಿವಪ್ರಕಾಶ್ ನನ್ನ ಬಂಧಿಸಿ ತನಿಖೆಗೆ ಒಳಪಡಿಸಿದಾಗ ಹೋಟೆಲ್ ನಲ್ಲಿ ನಡೆದ ಘಟನೆ ಚಿತ್ರಣದ ಮಾಹಿತಿ ರಿವೀಲ್ ಮಾಡಿದ್ದಾರೆ. ಬಿಯರ್ ಬಾಟಲ್ ನಿಂದ ಹಲ್ಲೆ ಮಾಡುವಂತೆ ಪ್ರಚೋದನೆ ಮಾಡಿದ್ದು ರಾಗಿಣಿ ಮತ್ತು ರವಿ. ಪಕ್ಕದ ಟೆಬಲ್ ನಲ್ಲಿ ಕೂತಿದ್ದನ್ನ ನೋಡಿ ಬಿಯರ್ ಬಾಟಲ್ ಹಿಡಿದು ರಾಗಿಣಿ ಮತ್ತು ರವಿ ಚಿಯರ್ಸ್.. ಚಿಯರ್ಸ್ ಎಂದು ಕಿಚಾಯಿಸಿದ್ದಾಕ್ಕೆ ಹಲ್ಲೆ ಮಾಡಲು ಯತ್ನಿದೆ ಎಂದು ತನಿಖಾಧಿಕಾರಿಗಳ ಮುಂದೆ ಹೇಳಿದ್ದಾರೆ.

 

ರಾಗಿಣಿಯ ಹಾಲಿ ಪ್ರಿಯಕರ ರವಿ ಹಾಗೂ ತುಪ್ಪದ ಹುಡ್ಗಿ ರಾಗಿಣಿಗೆ ಪೊಲೀಸರು ನೋಟಿಸ್ ನೀಡುವ ಸಾದ್ಯತೆಗಳಿವೆ. ಘಟನೆ ನಡೆದ ಬಳಿಕ ಯಾರ ಕೈಗೂ ಹಾಗೂ ಸಂಪರ್ಕಕ್ಕೂ ನಟಿ ರಾಗಿಣಿ ಸಿಗುತ್ತಿಲ್ಲ. ಪೊಲೀಸರು ನೀಡಿದ್ರೆ ವಿಚಾರಣೆಗೆ ನಟಿ ಹಾಜರಾಗಬೇಕಾಗುತ್ತದೆ.

Share This Article
Leave a Comment

Leave a Reply

Your email address will not be published. Required fields are marked *