ವಿಶ್ವಶಾಂತಿಗಾಗಿ ಹೊಗೆ ಇಲ್ಲದ ಮಹಾ ಯಜ್ಞ

Public TV
1 Min Read

ತುಮಕೂರು: ನಗರದ ಗಾಜಿನ ಮನೆಯಲ್ಲಿ ವಿಶ್ವಶಾಂತಿಗಾಗಿ ಹೊಗೆ ಇಲ್ಲದ ಮಹಾ ಯಜ್ಞ ನಡೆಯುತ್ತಿದೆ. ಜೈನ ಧರ್ಮಿಯರಿಂದ ಈ ವಿಶಿಷ್ಟ ಹೊಗೆಯಿಲ್ಲದ ‘ಕಲ್ಪದ್ರುಮ ಮಾಹಾಮಂಡಳ ಆರಾಧನಾ ಯಜ್ಞ’ ಆಯೋಜನೆಗೊಂಡಿದೆ. ಜೈನ ಮುನಿಗಳಾದ ಅರ್ಮೋ ಕೀರ್ತಿ ಮತ್ತು ಅಮರ ಕೀರ್ತಿಗಳ ಉಪಸ್ಥಿತಿಯಲ್ಲಿ ಆರಾಧನೆ ನಡೆಯುತ್ತಿದೆ.

9 ದಿನಗಳ ಕಾಲ ಈ ಮಹಾ ಯಜ್ಞ ನಡೆಯಲಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದ ಭಕ್ತರು ಪಾಲ್ಗೊಂಡಿದ್ದಾರೆ. ಚಕ್ರವರ್ತಿಗಳು ದಿಗ್ವಿಜಯ ಯಾತ್ರೆ ಮಾಡಿ ಬಂದಾಗ ವಿಶ್ವಶಾಂತಿಗಾಗಿ ಈ ಆರಾಧನೆ ಮಾಡುತ್ತಿದ್ದರು. ಅದೇ ಇಲ್ಲಿ ಸೇರಿದ ನೂರಾರು ಭಕ್ತಾಧಿಗಳು ಮುಖುಟ ಧರಿಸಿ, ಮಾಲಾಧಾರಿಗಳಾಗಿ ಸಾಕ್ಷಾತ್ ಚಕ್ರವರ್ತಿಗಳಂತೆ ಕಂಗೊಳಿಸಿಕೊಂಡು ಶಾಂತಿಗಾಗಿ ಆರಾಧನೆ ನಡೆಸುತ್ತಿದ್ದಾರೆ. ಜಲ, ಚಂದನ, ಅಕ್ಷತ, ಫಲ, ಪುಷ್ಪ, ದೀಪ, ದೂಪ ಹಾಗೂ ಅಷ್ಟ ದ್ರವ್ಯಗಳಿಂದ ಅರ್ಚನೆ ನಡೆಸಿ ವಿಶ್ವಶಾಂತಿಗಾಗಿ ಹೊಗೆ ಇಲ್ಲದ ಯಜ್ಞ ನಡೆಸುತ್ತಿದ್ದಾರೆ.

ಬೆಳಗ್ಗೆ 6 ರಿಂದ 8ರ ವರೆಗೆ ಆರಾಧನೆ, ಮಧ್ಯಾಹ್ನ 1ಕ್ಕೆ ಮಂಗಳಾರತಿ, ಭಾವಚಿತ್ರ ಅನಾವರಣ, ದೀಪ ಬೆಳಗುವಿಕೆ ಕಾರ್ಯಕ್ರಮ ನಡೆದಿದೆ. ತುಮಕೂರಿನಲ್ಲಿ ಈ ಯಜ್ಞವನ್ನು ಇದೇ ಮೊದಲ ಬಾರಿ ಆಯೋಜನೆ ಮಾಡಲಾಗಿದೆ. ಹಾಗಾಗಿ ವಿವಿಧ ಜಿಲ್ಲೆಗಳಿಂದ ಭಕ್ತಾಧಿಗಳು ಬಂದು ಪಾಲ್ಗೊಳ್ಳುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *