ಆಸ್ಪತ್ರೆ ಕಾಮಗಾರಿಗೆ ಪೇಜಾವರ ಶ್ರೀಗಳು ಓದಿದ ಶಾಲೆಯ ಕಟ್ಟಡದಲ್ಲಿ ಬಿರುಕು- ಬಿಆರ್ ಶೆಟ್ಟಿಗೆ ತಲೆಬಾಗ್ತಿದೆಯಾ ಸರ್ಕಾರ?

Public TV
1 Min Read

ಉಡುಪಿ: ಇದು 131 ವರ್ಷಗಳ ಹಳೆಯ ಐತಿಹಾಸಿಕ ಶಾಲೆ. ಪೇಜಾವರ ಶ್ರೀಗಳಂತಹ ಹಿರಿಯರು ಇಲ್ಲಿ ಕಲಿತಿದ್ದಾರೆ. ಆದ್ರೆ ಖಾಸಗಿ ಆಸ್ಪತ್ರೆಯ ಲಾಬಿಗೆ ಆ ಶಾಲೆಯ ಸ್ಥಳಾಂತರಕ್ಕರ ಹುನ್ನಾರ ನಡೀತಿದೆ. ಶಾಲೆಯನ್ನ ಅಭಿವೃದ್ಧಿಗೊಳಸಬೇಕಾದವ್ರೇ ಈಗ ಶಿಫ್ಟ್ ಮಾಡೋಕೆ ನಿರ್ಧರಿಸಿದ್ದಾರೆ.

ಹೌದು. ಉಡುಪಿ ನಗರದಲ್ಲಿರೋ ಮಹಾತ್ಮಗಾಂಧಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯು 1885ರಲ್ಲಿ ಸ್ಥಾಪನೆಯಾಗಿದೆ. ಈ ಶಾಲೆಯಲ್ಲಿ ಸದ್ಯ 60ಕ್ಕೂ ಅಧಿಕ ಮಕ್ಕಳು ಕಲೀತಿದ್ದಾರೆ. ಕೂಲಿ ಕೆಲಸಕ್ಕಾಗಿ ನಗರಕ್ಕೆ ಬಂದಿರೋ ಉತ್ತರ ಕರ್ನಾಟಕದ ಕೂಲಿ ಕಾರ್ಮಿಕರ ಮಕ್ಕಳೇ ಇಲ್ಲಿ ಹೆಚ್ಚಾಗಿದ್ದಾರೆ.

ಈ ಶಾಲೆಯ ಹಿಂಭಾಗದಲ್ಲಿ ಉಡುಪಿ ಮೂಲದ ದುಬೈ ಉದ್ಯಮಿ ಬಿಆರ್ ಶೆಟ್ಟಿ ಎರಡು ಆಸ್ಪತ್ರೆ ನಿರ್ಮಿಸುತ್ತಿದ್ದಾರೆ. ಆಸ್ಪತ್ರೆ ಕಾಮಗಾರಿಯಿಂದ ಶಾಲಾ ಕಟ್ಟಡ ಈಗಾಗಲೇ ಬಿರುಕು ಬಿಟ್ಟಿದೆ. ರಸ್ತೆಗೆ ಆಸ್ಪತ್ರೆ ಕಾಣುವುದಕ್ಕೆ ಅಡ್ಡಲಾಗಿರೋ ಈ ಶಾಲೆಯನ್ನೇ ಸ್ಥಳಾಂತರ ಮಾಡಲಾಗುತ್ತಿದೆ ಅನ್ನೋ ಆರೋಪ ಕೇಳಿಬಂದಿದೆ.

ನಗರಸಭೆಯ ಮುಂಭಾಗದಲ್ಲೇ ಇರೋ ಈ ಶಾಲೆಯ ಅಭಿವೃದ್ಧಿಗೆ ಯಾರೂ ಮುಂದಾಗಿಲ್ಲ. ಆದರೆ ಶಾಲೆಯನ್ನು ಇದೇ ಜಾಗದಲ್ಲಿ ಅಭಿವೃದ್ಧಿ ಮಾಡುವಂತೆ ಒತ್ತಾಯಿಸಿರುವ ವಿದ್ಯಾರ್ಥಿಗಳು ಶಾಲೆಯ ಸಮಸ್ಯೆ ಬಗ್ಗೆ ಬಾಲ ನ್ಯಾಯ ಮಂಡಳಿಗೂ ದೂರು ಕೊಟ್ಟಿದ್ದಾರೆ. ಕೊನೆಗೆ ಉದ್ಯಮಿಯ ಆಸೆ ಈಡೇರಿಸಲು ಸರ್ಕಾರ ಶಾಲೆಗೆ ಎಳ್ಳುನೀರು ಬಿಟ್ಟಿದೆ. ಶಿಕ್ಷಣಾಧಿಕಾರಿಯನ್ನ ಕೇಳಿದ್ರೆ, ಇದು ತಾತ್ಕಾಲಿಕ ಸ್ಥಳಾಂತರ, ಮಕ್ಕಳ ಹಿತದೃಷ್ಟಿಯಿಂದ ಮಾಡಿದ್ದೇವೆ ಅಂತ ಹೇಳುತ್ತಿದ್ದಾರೆ.

ಇದನ್ನೂ ಓದಿ: ಸ್ವಾತಂತ್ರ್ಯ ದಿನದಂದು ರಾಷ್ಟ್ರಧ್ವಜ ಹಿಡಿದು ಉಡುಪಿ ಶಾಲೆ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಸ್ವಾತಂತ್ರ್ಯ ದಿನಾಚರಣೆಯಂದು ಶಾಲಾ ವಿದ್ಯಾರ್ಥಿಗಳು ಸ್ಥಳಾಂತರ ವಿರೋಧಿಸಿ ಪ್ರತಿಭಟಿಸಿದ್ದರು. ನಮ್ಮ ಸಿಎಂ ಸಿದ್ದರಾಮಯ್ಯ ಸರ್ಕಾರಿ ಶಾಲೆ, ಕನ್ನಡ ವ್ಯಾಕರಣ ಅಂತೆಲ್ಲಾ ಮಾತಾಡ್ತಾನೇ ಇರ್ತಾರೆ. ಆದ್ರೆ ಈ ಶಾಲೆಯ ಅಭಿವೃದ್ಧಿಗೆ ಮುಂದಾಗದ ಶಿಕ್ಷಣ ಇಲಾಖೆ, ಈಗ ಸ್ಥಳಾಂತರಕ್ಕೆ ಆಸಕ್ತಿ ವಹಿಸಿದೆ.

Share This Article
Leave a Comment

Leave a Reply

Your email address will not be published. Required fields are marked *