ನೀರಿಗಾಗಿ ಹೊತ್ತಿ ಉರಿದವು ನೂರಕ್ಕೂ ಹೆಚ್ಚು ಅಂಗಡಿಗಳು

Public TV
1 Min Read

ಮುಂಬೈ: ನೀರಿಗಾಗಿ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದ್ದು, ಈಡೀ ನಗರವೇ ಹೊತ್ತಿ ಉರಿದ ಘಟನೆ ಶುಕ್ರವಾರ ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ನಡೆದಿದೆ.

ಧಾರ್ಮಿಕ ಸ್ಥಳವೊಂದಕ್ಕೆ ಅಕ್ರಮವಾಗಿ ನೀರಿ ಸಂಪರ್ಕ ಕಲ್ಪಿಸಲಾಗಿತ್ತು. ಸಂಪರ್ಕವನ್ನು ಕಡಿತಗೊಳಿದ್ದರಿಂದ ಮಾತಿನ ಚಕಮಕಿ ಸಂಭವಿಸಿದೆ. ನಂತರ ಇದು ತಿರುವು ಪಡೆದುಕೊಂಡ ಪರಿಣಾಮ ಎರಡು ಗುಂಪುಗಳು ಘರ್ಷಣೆಗೆ ಮುಂದಾಗಿದೆ ಎಂದು ವರದಿಯಾಗಿದೆ.

ನಂತರ, ನಗರದ ಈ ಎರಡೂ ಗುಂಪಿನ ಯುವಕರು ಬೀದಿಗಿಳಿದು ಪರಸ್ಪರ ಕಲ್ಲು ತುರಾಟ ನಡೆಸಿದ್ದಾರೆ. ಕೆಲವು ಕಿಡಿಗೇಡಿಗಳು ವಾಹನಗಳಿಗೂ ಬೆಂಕಿ ಹಚ್ಚಿದ್ದು, ಈ ವೇಳೆ ಸುಮಾರು 100 ಅಂಗಡಿಗಳಿಗೂ ಬೆಂಕಿ ಹತ್ತಿಕೊಂಡಿದೆ. ತಡರಾತ್ರಿಯವರೆಗೆ ಪರಿಸ್ಥಿತಿ ಗಂಭೀ ಸ್ವರೂಪ ಪಡೆದುಕೊಂಡಿತ್ತು. ಅಲ್ಲದೇ, ಘಟನಾ ಸ್ಥಳದಲ್ಲಿದ್ದ ಅಂಗಡಿಗಳು ಹಾಗೂ ಕೆಲವು ವಾಹನಗಳು ಸುಟ್ಟು ಭಷ್ಮವಾಗಿವೆ.

ಎರಡು ಗುಂಪುಗಳ ನಡುವಿನ ಘರ್ಷಣೆ ಹಾಗೂ ಗುಂಪು ಚದುರಿಸಲು ಪೊಲೀಸರು ಕೈಗೊಂಡ ಕಾರ್ಯಾಚರಣೆ ದೃಶ್ಯವು ಘಟನಾ ಸ್ಥಳದಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವೇಳೆ 10 ಜನ ಪೊಲೀಸರು ಗಾಯಗೊಂಡಿದ್ದಾರೆ. ಸದ್ಯ ನಗರದಲ್ಲಿ ನಿಷೇಧಾಜ್ಞೆ ಜಾರಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *