ಗೋವಾ ಅಧಿಕಾರಿಗಳಿಂದ ಮತ್ತೆ ಮಹದಾಯಿ ವಿವಾದಿತ ಸ್ಥಳಕ್ಕೆ ಭೇಟಿ!

Public TV
1 Min Read

ಬೆಳಗಾವಿ: ಈ ತಿಂಗಳಲ್ಲೇ ನ್ಯಾಯಾಧೀಕರಣದ ತೀರ್ಪು ಬರುವ ಮೊದಲೇ ಮಹದಾಯಿ ವಿವಾದಿತ ಸ್ಥಳಕ್ಕೆ ಗೋವಾ ಅಧಿಕಾರಿಗಳು ಮತ್ತೆ ಭೇಟಿ ನೀಡುವ ಉದ್ಧಟತನ ತೋರಿದ್ದಾರೆ.

ಗೋವಾ ನೀರಾವರಿ ಇಲಾಖೆ ಮುಖ್ಯ ಎಂಜಿನಿಯರ್ ದಿನೇಶ್ ಮಹಾಲೆ ಸೇರಿ 8 ಜನರ ತಂಡ ಅನುಮತಿಯಿಲ್ಲದೆ ಕಳಸಾ ಬಂಡೂರಿ ಕಾಮಗಾರಿ ಸ್ಥಳಕ್ಕೆ ಬುಧವಾರ ಆಗಮಿಸಿತ್ತು. ಖಾನಾಪೂರದ ಜಾಂಬೋಟಿ ಔಟ್‍ಪೋಸ್ಟ್ ಬಳಿ ಪೊಲೀಸರು ವಿಚಾರಿಸಿದಾಗ ಮೊದಲಿಗೆ ದೇವಸ್ಥಾನಕ್ಕೆ ಹೋಗ್ತಿದ್ದೇವೆ ಅಂತ ಹೇಳಿದ್ದಾರೆ. ಮತ್ತಷ್ಟು ವಿಚಾರಣೆಗೆ ಮುಂದಾದಾಗ ಪೊಲೀಸರ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ.

ಔಟ್‍ಪೋಸ್ಟ್ ನಲ್ಲಿ ಭೇಟಿ ಬಗ್ಗೆ ಲಿಖಿತ ಹೇಳಿಕೆ ನೀಡುವಾಗ ಗೋವಾ ಸರ್ಕಾರದ ಅಣತಿಯಂತೆ ಬಂದಿರುವುದಾಗಿ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ. ಅಲ್ಲದೆ, ವಾಪಸ್ ಗೋವಾಗೆ ತೆರಳಿ ಪೊಲೀಸರು ಅನುಚಿತವಾಗಿ ವರ್ತಿಸಿದ್ದಾರೆ ಅಂತ ಆರೋಪಿಸಿದ್ದಾರೆ.

ಇದೇ ಜನವರಿ 13ಕ್ಕೆ ಸಹ ಕಳಸಾ-ಬಂಡೂರಿ ಕಾಮಗಾರಿಯ ಕಣಕುಂಬಿಗೂ ಗೋವಾ ಅಧಿಕಾರಿಗಳು ಭೇಟಿ ನೀಡಿದ್ದರು. ಬಳಿಕ, ಗೋವಾ ಅಧಿಕಾರಿಗಳು, ನೀರಾವರಿ ಸಚಿವರು ಧಿಮಾಕಿನ ಹೇಳಿಕೆಗಳನ್ನ ನೀಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *