ಕೌಟುಂಬಿಕ ಸಿನಿಮಾದಲ್ಲಿ ಮಹಾಬಲಿ

By
1 Min Read

ಶಿವಮೊಗ್ಗದ ಅನಂತಪುರದಲ್ಲಿ ಹೋಟೆಲ್ ನಡೆಸುತ್ತಿರುವ ಮಲ್ಲೇಶ್‌ ಏಡೇಹಳ್ಳಿ ಬಣ್ಣದ ಲೋಕದ ಮೋಹದಿಂದ ’ಮಹಾಬಲಿ’ ಎನ್ನುವ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ನಿರ್ದೇಶನ ಮಾಡುವ ಜತೆಗೆ ಮಾಲಸಾಂಭ ಕಂಬೈನ್ಸ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದ ಧ್ವನಿಸಾಂದ್ರಿಕೆ ಅನಾವರಣ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು ವ್ಯಾಪಾರದೊಂದಿಗೆ ಏನಾದರೂ ಮಾಡಬೇಕೆಂಬ ತುಡಿತ ಹೆಚ್ಚಾಗಿತ್ತು. ಗೆಳಯ ಆರ್ಯ ಚಿತ್ರರಂಗಕ್ಕೆ ಬರುವಂತೆ ಆಸಕ್ತಿ ಮೂಡಿಸಿದರು. ಅದರ ಪರಿಣಾಮವೇ ಚಿತ್ರ ಬರಲು ಕಾರಣವಾಯಿತು. ಅಪ್ಪಟ್ಟ ಕುಟುಂಬಸಮೇತ ನೋಡಬಹುದಾದ ಕಥೆ ಇರಲಿದೆ. ಇದನ್ನೂ ಓದಿ : ಪ್ರಶಾಂತ್ ನೀಲ್ -ಜ್ಯೂ.ಎನ್‌ಟಿಆರ್ ವಿವಾಹ ವಾರ್ಷಿಕೋತ್ಸವ ಸಂಭ್ರಮ ಹೇಗಿತ್ತು ಗೊತ್ತಾ?

ಇಂದಿನ ಪ್ರಪಂಚದಲ್ಲಿ ಮಾನವ ನಿರ್ಮಿಸಿಕೊಂಡ ಜೀವನದ ಮೌಲ್ಯಗಳು ಅಧೋಗತಿಗೆ ಹೋಗುತ್ತಿದೆ. ಆತನಿಗೆ ಅವನದೇ ಆದಂತಹ ಸೀಮಿತ ಕುಟುಂಬ ಇರುತ್ತದೆ. ಅಂಥ ಒಂದು ಕುಟುಂಬದ ಮೌಲ್ಯವು ಯಾವ ಮಟ್ಟಕ್ಕೆ ಹೋಗ್ತಾ ಇದೆ. ಅದರ ಅರ್ಥ, ನಿಬಂದನೆ ಬಗ್ಗೆ ಜಾಗೃತಿಯನ್ನು ಮೂಡಿಸುವುದೇ ಸಾರಾಂಶವಾಗಿದೆ. ಶಿಕಾರಿಪುರ, ಸಾಗರ, ಮಲ್ಲೇನಹಳ್ಳಿ, ಹಾವೇರಿ, ಹಿರೇಕೇರಿ, ಚಿಕ್ಕೇರಿ, ಕನಕದಾಸರ ಪೀಠ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಹಿರಿಯ ಪುತ್ರ ಪೃಥ್ವಿರಾಜ್‌ನನ್ನು ನಾಯಕನಾಗಿ ಪರಿಚಯಿಸಿದ್ದೇನೆ. ವೈಯಕ್ತಿಕ ಕಾರಣದಿಂದ ನಾಯಕಿ ಮಾನ್ವಿತರಾಜ್ ಬಂದಿಲ್ಲ.  ರಥಸಪ್ತಮಿ ಅರವಿಂದ ಹೊರತುಪಡಿಸಿ ಮಿಕ್ಕವರೆಲ್ಲೂ ಹೊಸಬರು. ಎಲ್ಲರಿಗೂ ತರಬೇತಿ ನೀಡಿ ಕ್ಯಾಮಾರ ಮುಂದೆ ನಿಲ್ಲಿಸಿರುವೆ ಎಂದರು. ಇದನ್ನೂ ಓದಿ : ಯಶ್ ಮುಂದಿನ ಚಿತ್ರ ಯಾರ ಜೊತೆ? ಹೊರಬಿತ್ತು ಬಿಗ್ ನ್ಯೂಸ್

ವಾಸುದೇವ್‌ ಆಚಾಪುರ, ಕುಳ್ಳಯೋಗೀಶ್, ನಾಯಕಿಯ ತಾಯಿಯಾಗಿ ಕಾಣಿಸಿಕೊಂಡಿರುವ ಪುಷ್ಪನಾಯಕ್, ಚೇತನ್‌ಶೆಟ್ಟಿ, ಸೌಪರ್ಣಿಕ, ನೂತನ್, ಯುವರಾಜ್, ಪ್ರವೀಣ್‌ ರಾಜ್‌ಪುತ್ತೂರು, ಪ್ರದೀಪ್‌ ಮೆಂಥೆಲ್, ಉಮೇಶ್.ಕೆ.ಎಲ್, ಆಚಾರ್ಯರಾಘು ಮುಂತಾದವರ ತಾರಾಗಣದಲ್ಲಿ ಇದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *