ಕೊಡಗಿನ ರಸ್ತೆಯಲ್ಲಿ ಹುಲಿ ಪ್ರತ್ಯಕ್ಷ – ವ್ಯಾಘ್ರನ ಕಂಡು ಆತಂಕಕ್ಕೆ ಒಳಗಾದ ವಾಹನ ಸವಾರರು

Public TV
1 Min Read

ಮಡಿಕೇರಿ: ಅರಣ್ಯ ಪ್ರದೇಶದ ಮಖ್ಯ ರಸ್ತೆಯಲ್ಲಿ ಯಾವುದೇ ಭಯ ಇಲ್ಲದೇ ಜನರ ವಾಹನ ಸವಾರರ ನಡುವೆ ಓಡಾಡಿದ ಹುಲಿಯನ್ನು ಕಂಡು ಸ್ಥಳೀಯರು ಅಂತಕಕ್ಕೆ ಒಳಗಾದ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕಾರ್ಮಾಡ್ ಬಾಳೆಲೆ ಗ್ರಾಮದ ಮುಖ್ಯ ರಸ್ತೆಯಲ್ಲಿ ನಡೆದಿದೆ.

ಇಂದು ಸಂಜೆ ಗ್ರಾಮದ ರಸ್ತೆಯಲ್ಲಿ ಯಾವುದೇ ಅಂತಕ ಇಲ್ಲದೇ ಹುಲಿರಾಯ ರಸ್ತೆಯಲ್ಲಿ ರಾಜಗಂಭೀರ್ಯದಿಂದ ನಡೆದಾಡಿದ್ದಾನೆ. ಇದನ್ನು ಗಮನಿಸಿದ ವಾಹನ ಚಾಲಕರು ಗ್ರಾಮಸ್ಥರು ತಮ್ಮ ಮೊಬೈಲ್ ನಲ್ಲಿ ಹುಲಿರಾಯ ಓಡಾಡುತ್ತಿರುವುದನ್ನು ಸೆರೆ ಹಿಡಿದಿದ್ದಾರೆ. ಹುಲಿ ಮಾತ್ರ ವಾಹನವನ್ನು ನೋಡಿದ್ರು ಯಾವುದೇ ಭಯ ಇಲ್ಲದೇ ವಾಹನದ ನಡುವೇ ರಸ್ತೆಯನ್ನು ದಾಟಿದೆ.

ಆದರೆ ಹುಲಿಯನ್ನು ಕಂಡ ವಾಹನ ಸವಾರರು ಮಾತ್ರ ಅಂತಕಕ್ಕೆ ಒಳಗಾಗಿದ್ದಾರೆ. ಸದ್ಯ ಈಗ ಬಾಳೆಲೆ ಕಾರ್ಮಾಡ್ ಗ್ರಾಮೀಣ ರಸ್ತೆಯಿಂದ ಹುಲಿ ದಾಟಿ ಹೋಗಿದ್ದು, ಗ್ರಾಮದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಹುಲಿ ಪ್ರತ್ಯಕ್ಷವಾಗಿದ್ದು, ನಾಗರಹೊಳೆ ಅಕ್ಕ ಪಕ್ಕದ ಗ್ರಾಮಸ್ಥರಿಗೆ ಆತಂಕ ಉಂಟು ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *