ಗಣಪತಿ ಕೂರಿಸಲು 500 ರೂ. ಒಂದು ಫುಲ್ ಬಾಟಲ್ ಕೊಡ್ಬೇಕು: ಪೊಲೀಸಪ್ಪನ ಬೇಡಿಕೆ

Public TV
1 Min Read

ಮಡಿಕೇರಿ: ನಿನ್ನೆಯಷ್ಟೇ ಗಣೇಶ ಮೂರ್ತಿ ವಿಸರ್ಜನೆ ವೇಳೆ ಡಿಜೆ ಹಾಡಿಗೆ ಸ್ಟೆಪ್ ಹಾಕಿದ್ದ ಹೆಡ್ ಕಾನ್‍ಸ್ಟೇಬಲ್ ಮದ್ಯಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಅವರದ್ದೇ ಎನ್ನಲಾಗಿರುವ ಆಡಿಯೋ ಈಗ ವೈರಲ್ ಆಗಿದೆ.

ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ನನಗೆ 500 ರೂ. ಹಾಗೂ ಒಂದು ಫುಲ್ ಬಾಟಲ್ ಎಣ್ಣೆ ಕೊಡಬೇಕು ಎಂದು ಮೊಬೈಲ್‍ನಲ್ಲಿ ಸ್ಥಳೀಯ ಯುವಕರೊಂದಿಗೆ ಮಾತನಾಡಿದ್ದಾರೆ ಎನ್ನುವ ಆಡಿಯೋ ವೈರಲ್ ಆಗಿದೆ. ನೀವು ಗಣಪತಿ ಕೂರಿಸಲು ಮತ್ತು ವಿಸರ್ಜನೆ ಮಾಡಬೇಕು ಎಂದರೆ 500 ರೂ., ಒಂದು ಫುಲ್ ಬಾಟಲ್ ಮದ್ಯ ಕೊಡಬೇಕು ಎಂದು ಯುವಕರೊಂದಿಗೆ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಹಾರಂಗಿ ಔಟ್ ಪೋಸ್ಟ್ ಠಾಣೆ ಕಾನ್‍ಸ್ಟೇಬಲ್ ರಂಗೇಗೌಡರು ಮಾತನಾಡಿದ್ದಾರೆ.

ಈ ಆಡಿಯೋದಲ್ಲಿ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಹಾರಂಗಿ ನಿವಾಸಿ ಕಿರಣ್ ಮತ್ತು ಸ್ನೇಹಿತರು ಹೆಡ್ ಕಾನ್‍ಸ್ಟೇಬಲ್ ರಂಗೇಗೌಡ ಎಂಬುವರ ಜೊತೆ ಮಾತನಾಡಿದ್ದು, ನಿನ್ನೆ ತಾನೆ ಒಂದು ಎಂ.ಹೆಚ್ ಕೊಟ್ಟಿದ್ದೇವೆ. ಅಲ್ಲದೆ ಕ್ಯಾಮೆರಾಕ್ಕೆ ಎಂದು 500 ತೆಗೆದುಕೊಂಡು ಹೋಗಿದ್ದೀರಾ. ಗಣಪತಿ ವಿಸರ್ಜನೆಗೆ ನಮಗೆ ಹಣವಿಲ್ಲ ಸ್ವಲ್ಪ ಕಡಿಮೆ ಮಾಡಿಕೊಳ್ಳಿ ಸರ್ ಎಂದು ಸಂಭಾಷಣೆ ನಡೆಸಿದ್ದಾರೆ. ಆಡಿಯೋ ಗಮನಿಸಿದರೆ ಯುವಕರು ಉದ್ದೇಶ ಪೂರ್ವಕವಾಗಿಯೇ ಸಿಬ್ಬಂದಿ ಜೊತೆ ಎಣ್ಣೆ ವಿಚಾರ ಮಾತನಾಡಿ ರೆಕಾರ್ಡ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *