ಹಸಿವಿನಿಂದ ಸಾಯೋದಕ್ಕಿಂತ ಕೊರೊನಾ ಬರೋದೇ ಲೇಸು – ಕೂಲಿ ಕಾರ್ಮಿಕರ ಅಳಲು

Public TV
1 Min Read

ಮಡಿಕೇರಿ: ಎಲ್ಲೆಡೆ ಹರಡುತ್ತಿರುವ ಕೊರೊನಾ ವೈರಸ್ ಭೀತಿಯಿಂದ ದೇಶದಲ್ಲೆಡೆ ಲಾಕ್‍ಡೌನ್ ಜಾರಿಯಲ್ಲಿದೆ. ಈ ಹಿನ್ನೆಲೆ ಕಾರ್ಮಿಕರಿಗೆ ಇದೀಗಾ ಕೆಲಸವಿಲ್ಲದೆ ಸಂಕಷ್ಟ ಎದುರಾಗಿದ್ದು, ಹೀಗೆ ಹಸಿವಿನಿಂದ ಸಾಯುವ ಬದಲು ಕೊರೊನಾ ಬರೋದೇ ಲೇಸು ಎಂದು ಅಳಲನ್ನು ತೋಡಿಕೊಂಡಿದ್ದಾರೆ.

ಇಂದು ಪ್ರಧಾನಿ ಮೋದಿ ಅವರು ಒಂದು ರೀತಿಯಲ್ಲಿ ಕಾರ್ಮಿಕ ವರ್ಗಕ್ಕೆ ವಿನಾಯಿತಿ ನೀಡುತ್ತಾರೆ ಎಂದು ಕಾರ್ಮಿಕರು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಮೋದಿ ಅವರು ಇನ್ನಷ್ಟು ದಿನ ಲಾಕ್‍ಡೌನ್ ಮುಂದುವರೆಯುತ್ತದೆ ಎಂದು ಘೋಷಿಸಿದ್ದು ಕಾರ್ಮಿಕರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸುಂಟಿಕೋಪ್ಪದ ಬಹುತೇಕ ಗ್ರಾಮಗಳು ಬಡಾವಣೆಗಳಲ್ಲಿ ಹೆಚ್ಚಾಗಿ ತೋಟದ ಕಾರ್ಮಿಕರು, ಕಟ್ಟಡದ ಕಾರ್ಮಿಕರು ವಾಸವಾಗಿದ್ದು, ಲಾಕ್‍ಡೌನ್ ಮುಂದುವರೆದಿರುವುದರಿಂದ ಜೀವನ ನಡೆಸುವುದು ಹೇಗೆ ಎಂದು ಚಿಂತೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಜಿಲ್ಲೆಯಲ್ಲಿ ಪಡಿತರ ವಿತರಣೆ ಕಾರ್ಯಗಳು ನಡೆಯುತ್ತಿದೆ. ಅದರಲ್ಲಿ ಅಕ್ಕಿ ಮತ್ತು ಗೋಧಿ ಮಾತ್ರ ಸಿಕ್ಕುತ್ತಿದೆ. ಎಷ್ಟು ದಿನಗಳು ಬರಿ ಗಂಜಿ ಕುಡಿದು ಬದುಕೋದು ಎಂದು ಕಣ್ಣೀರು ಹಾಕುತ್ತಿದ್ದಾರೆ.

ಮನೆಯಿಂದ ಹೊರಬಂದರೆ ಪೊಲೀಸ್ ಹೊಡಿತಾರೆ. ಒಳಗೆ ಇದ್ದರೆ ಬಡತನ ಕಿತ್ತು ತಿನ್ನುತ್ತೆ. ಮನೆ ಬಾಡಿಗೆ ಕಟ್ಟೋದು ಹೇಗೆ? ಮಕ್ಕಳಿದ್ದಾರೆ ಅವರನ್ನು ಸಾಕುವುದು ಹೇಗೆ? ಕನಿಷ್ಠ ಸೌಲಭ್ಯವನ್ನಾದರೂ ಕೊಡಿ, ಗಂಡಸರಿಗಾದರೂ ದುಡಿಯುವುದಕ್ಕೆ ಅವಕಾಶ ನೀಡಿ ಎಂದು ಕಾರ್ಮಿಕ ವರ್ಗದ ಮಹಿಳೆಯರು ಕಣ್ಣೀರು ಹಾಕುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *