ಗ್ರಾಮ ಪಂಚಾಯ್ತಿ ಎಡವಟ್ಟು – ಒಂದೇ ಶವಕ್ಕೆ ಎರಡೆರಡು ಬಾರಿ ಅಂತ್ಯಸಂಸ್ಕಾರ

Public TV
1 Min Read

ಮಡಿಕೇರಿ: ಹಿಂದೂ ಸಂಪ್ರದಾಯದ ಪ್ರಕಾರ ಯಾರೇ ಸತ್ತರೂ ಆ ಮೃತದೇಹಕ್ಕೆ ಒಮ್ಮೆ ಶವಸಂಸ್ಕಾರ ಮಾಡಿ ಮುಕ್ತಿ ಕಾಣಿಸಲಾಗುತ್ತೆ. ಆದರೆ ಮಡಿಕೇರಿ ತಾಲೂಕಿನ ನಾಪೋಕ್ಲಿನಲ್ಲಿ ಮಾತ್ರ ಒಂದೇ ಶವಕ್ಕೆ ಎರಡೆರಡು ಬಾರಿ ಅಂತ್ಯಸಂಸ್ಕಾರ ಮಾಡಲಾಗಿದೆ.

ಹೌದು. ಇದನ್ನು ಬಗ್ಗೆ ತಿಳಿದರೆ ವಿಚಿತ್ರ ಅನಿಸುತ್ತೆ. ಎರಡೆರಡು ಬಾರಿ ಯಾಕೆ ಶವಸಂಸ್ಕಾರ ಮಾಡಿದರು ಎಂಬ ಪ್ರಶ್ನೆ ಕೂಡ ತಲೆಗೆ ಬರುತ್ತೆ. ಅಸಲಿಗೆ ಇದಕ್ಕೆ ಕಾರಣ ಗ್ರಾಮ ಪಂಚಾಯ್ತಿಯ ಎಡವಟ್ಟು. ಕಳೆದ ಗುರುವಾರವಷ್ಟೇ ನಾಪೋಕ್ಲು ಗ್ರಾಮ ಪಂಚಾಯ್ತಿ ಆಡಳಿತ ಮಂಡಳಿ ಗ್ರಾಮದ ಕಸವಿಲೇವಾರಿ ಮಾಡುವುದಕ್ಕಾಗಿ ಹಿಂದೂ ರುದ್ರ ಭೂಮಿಯಲ್ಲಿ ಬೃಹತ್ ಗುಂಡಿ ತೆಗೆದಿತ್ತು. ಈ ವೇಳೆ ಭೂಮಿಯಲ್ಲಿ ಸಿಕ್ಕ ಶವಗಳನ್ನು ಗುಂಡಿತೆಗೆದ ಮಣ್ಣಿನಡಿಯಲ್ಲಿ ಹಾಕಿ ಮುಚ್ಚಲಾಗಿತ್ತು.

ಪಂಚಾಯತ್ ವಿರುದ್ಧ ಪ್ರಕರಣ ದಾಖಲಾಗಿ ಆ ಗುಂಡಿಯನ್ನು ಪುನಃ ಮುಚ್ಚುವ ಸಂದರ್ಭದಲ್ಲಿ ಮಣ್ಣಿನಡಿಯಲ್ಲಿ ಒಂದು ಶವದ ಇಡೀ ಅಸ್ಥಿಪಂಜರ ದೊರೆತಿತ್ತು. ಹೀಗಾಗಿ ಆ ಅಸ್ಥಿಪಂಜರಕ್ಕೆ ಪುನಃ ಇಂದು ಹಿಂದೂ ಸಂಪ್ರದಾಯಂತೆ ಶವಸಂಸ್ಕಾರ ನೆರವೇರಿಸಲಾಯಿತು. ಆದರೆ ಒಂದೇ ಶವಕ್ಕೆ ಎರಡೆರಡು ಬಾರಿ ಸಂಸ್ಕಾರ ಮಾಡುವಂತೆ ಮಾಡಿದ ಪಂಚಾಯ್ತಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಮ್ಮ ತಪ್ಪಿಗೆ ರುದ್ರ ಭೂಮಿಯಲ್ಲಿವ ಶವವನ್ನು ಹೊರತೆಗೆದರಲ್ಲ ಎಂದು ಕಿಡಿಕಾರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *