ಪತಿಯನ್ನು ಕೊಲೆಗೈದು ಅಡುಗೆ ಮನೆಯಲ್ಲಿ ಹೂತಿಟ್ಟ ಪತ್ನಿ

Public TV
2 Min Read

– ಗಂಡ ಕಾಣೆಯಾಗಿದ್ದಾರೆಂದು ದೂರು
– ಮೃತನ ಅಣ್ಣನ ಅನುಮಾನದ ಮೇರೆಗೆ ಪರಿಶೀಲನೆ

ಲಕ್ನೋ: ಅಕ್ರಮ ಸಂಬಂಧ ಹೊಂದಿದ್ದ ಪತಿಯನ್ನು ಸ್ವತಃ ಪತ್ನಿಯೇ ಕೊಂದು ಅಡುಗೆ ಮನೆಯಲ್ಲಿ ಹೂತುಹಾಕಿರುವ ಘಟನೆ ಮಧ್ಯಪ್ರದೇಶದ ಅನುಪ್ಪೂರ ಜಿಲ್ಲೆಯಲ್ಲಿ ನಡೆದಿದೆ.

ಕೊಲೆಯಾದ ಪತಿಯನ್ನು ಕರೋಂಡಿ ಗ್ರಾಮದ ವಕೀಲ ಮಹೇಶ್ ಬನವಾಲ್ (35) ಎಂದು ಗುರುತಿಸಲಾಗಿದೆ. ಈತನ ಪತ್ನಿ ಪ್ರಮೀಳಾ (32) ತನ್ನ ಪತಿ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಕೊಲೆಮಾಡಿ. ನಂತರ ಅಕ್ಟೋಬರ್ 22 ರಂದು ತನ್ನ ಪತಿ ಕಾಣೆಯಾಗಿದ್ದಾರೆ ಎಂದು ದೂರು ನೀಡಿದ್ದಾಳೆ.

ಪತ್ನಿಯಿಂದ ದೂರು ಪಡೆದ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ಹುಡುಕಾಟ ಆರಂಭಿಸಿದ್ದಾರೆ. ಈ ವೇಳೆ ಒಂದು ದಿನ ಠಾಣೆಗೆ ಬಂದ ಮಹೇಶ್ ಬನವಾಲ್ ಅವರ ಅಣ್ಣ ಅರ್ಜನ್ ಬನವಾಲ್ ಅವರು, ನನಗೆ ನನ್ನ ತಮ್ಮನ ವಿಚಾರದಲ್ಲಿ ಆತನ ಹೆಂಡತಿಯ ಮೇಲೆ ಅನುಮಾನವಿದೆ. ಆತ ಕಾಣೆಯಾದ ನಂತರ ನಾವು ಆತನ ಮನೆಗೆ ಹೋದರೆ ಪ್ರಮೀಳಾ ನಮ್ಮನ್ನು ಒಳಗೆ ಬಿಡುತ್ತಿಲ್ಲ, ಬಾಗಿಲ ಬಳಿಯೇ ನನ್ನ ಗಂಡ ಕಾಣೆಯಾಗಿದ್ದಕ್ಕೆ ನೀವೇ ಕಾರಣ ಎಂದು ಬೈದು ಕಳುಹಿಸುತ್ತಾಳೆ ಎಂದು ಹೇಳಿದ್ದಾರೆ.

ಅರ್ಜನ್ ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಪ್ರಮೀಳಾ ಮನೆಗೆ ಹೋಗಿದ್ದಾರೆ. ಈ ವೇಳೆ ಆಕೆಯ ಮನೆ ಬಳಿ ಹೋಗುತ್ತಿದ್ದಂತೆಯೇ ದುರ್ವಾಸನೆ ಬಂದಿದೆ. ಇದರಿಂದ ಮತ್ತಷ್ಟು ಅನುಮಾನಗೊಂಡ ಪೊಲೀಸರು ಮನೆಯನ್ನು ಪರಿಶೀಲನೆ ಮಾಡಿದಾಗ, ಅಡುಗೆ ಮಾಡುವ ಜಾಗದ ಕೆಳಗೆ ಗುಂಡಿ ತೆಗೆದಿರುವುದು ಕಂಡು ಬಂದಿದೆ. ಅಲ್ಲಿ ಅಗೆದು ನೋಡಿದಾಗ ಮಹೇಶ್ ಶವ ಪತ್ತೆಯಾಗಿದೆ.

ನಂತರ ಪತ್ನಿ ಪ್ರಮೀಳಾಳನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ಮಾಡಿದಾಗ, ನನ್ನ ಪತಿ ನನ್ನ ಸಹೋದರ ಮಾವ ಗಂಗಾರಾಮ್ ಅವರ ಪತ್ನಿ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಇದರಿಂದ ಬೇಸತ್ತು ನಾನು ಮತ್ತು ಸೋದರಮಾವ ಸೇರಿಕೊಂಡು ಆತನನ್ನು ಕೊಲೆ ಮಾಡಿದ್ದೆವು. ನಂತರ ಶವವನ್ನು ಸಾಗಿಸಲಾಗದೆ. ಅಡುಗೆ ಮನೆಯಲ್ಲಿ ಹೂತುಹಾಕಿದೆವು ಎಂದು ಒಪ್ಪಿಕೊಂಡಿದ್ದಾಳೆ.

ಆದರೆ ಪ್ರಮೀಳಾ ಹೇಳಿಕೆಯನ್ನು ಒಪ್ಪದ ಸಹೋದರ ಮಾವ ಗಂಗಾರಾಮ್, ನಾನು ಮಹೇಶ್ ನನ್ನು ಕೊಲೆ ಮಾಡಲು ಸಹಾಯ ಮಾಡಿಲ್ಲ. ಆಕೆ ಸುಳ್ಳು ಹೇಳುತ್ತಿದ್ದಾಳೆ ಎಂದು ಹೇಳಿದ್ದಾನೆ. ಆದರೆ ಪೊಲೀಸರು ಪ್ರಮೀಳಾ ಒಬ್ಬಳೇ ಕೊಂದು ಹೂತುಹಾಕಲು ಸಾಧ್ಯವಿಲ್ಲ. ಅದರಲ್ಲಿ ಬೇರೆ ಯಾರೋ ಇದ್ದಾರೆ ನಾವು ತನಿಖೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *