ಬಿಟ್ಟು ಹೋದವನಿಂದ ಮತ್ತೆ ಪ್ರೀತಿ ನಾಟಕ- ಪ್ರಿಯಕರ ಸೇರಿ ಮೂವರಿಂದ ಅಪ್ರಾಪ್ತೆ ಮೇಲೆ ಗ್ಯಾಂಗ್‍ರೇಪ್

Public TV
1 Min Read

ದಾವಣಗೆರೆ: ಪ್ರಿಯಕರನೊಬ್ಬ ತನ್ನ ಮೂವರು ಸ್ನೇಹಿತರ ಜೊತೆಗೂಡಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರೋ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ಜಿಲ್ಲೆಯ ಚನ್ನಗಿರಿ ತಾಲೂಕಿನ ಜೋಳದಾಳು ಗುಡ್ಡದಲ್ಲಿ ಶುಕ್ರವಾರದಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಭದ್ರಾವತಿ ತಾಲೂಕಿನ ರಂಗಾಪುರ ಗ್ರಾಮದ ಪ್ರಿಯಕರ ರಮೇಶ್ ತನ್ನ ಸ್ನೇಹಿತರಾದ ಅರುಣ್ ಹಾಗೂ ವಿಜಯ್ ಜೊತೆಗೂಡಿ ಈ ಕೃತ್ಯವೆಸಗಿದ್ದಾನೆ.

ಪ್ರೀತಿ ನಾಟಕ: ರಂಗಾಪುರ ಗ್ರಾಮದ ರಮೇಶ್ ಮತ್ತು ಅಪ್ರಾಪ್ತೆಯ ಪ್ರೀತಿ ಎರಡು ವರ್ಷದ ಹಿಂದೆ ಬ್ರೇಕ್ ಅಪ್ ಆಗಿತ್ತು. ರಮೇಶ್ ಪುನಃ ಪ್ರೀತಿಸುತ್ತೇನೆಂದು ಹೇಳಿ ಬಾಲಕಿಯನ್ನ ಜೂ.2 ರಂದು ಜೋಳದಾಳು ಅಮ್ಮನ ಗುಡ್ಡಕ್ಕೆ ಕರೆತಂದಿದ್ದ. ರಮೇಶ್ ಜೊತೆ ವಿಜಯ್, ಅರುಣ್ ಕೂಡ ಬಂದಿದ್ದು, ಮೂವರು ಸೇರಿ ಬಾಲಕಿಯನ್ನ ಹೆದರಿಸಿ ಅತ್ಯಾಚಾರ ಮಾಡಿದ್ದಾರೆ.

ಮೂವರು ಕಾಮುಕರಿಂದ ತಪ್ಪಿಸಿಕೊಂಡು ಹೋದ ಬಾಲಕಿ ಶಿವಮೊಗ್ಗದ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಶಿವಮೊಗ್ಗ ಆಸ್ಪತ್ರೆಯವರು ಈ ಬಗ್ಗೆ ಅಲ್ಲಿನ ಎಸ್‍ಪಿಗೆ ಮಾಹಿತಿ ನೀಡಿದ್ದಾರೆ. ನಂತರ ಚನ್ನಗಿರಿ ಪೊಲೀಸರು ಪ್ರಿಯಕರ ರಮೇಶನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ರಮೇಶ್ ಸ್ನೇಹಿತರಾದ ಮತ್ತಿಬ್ಬರು ಆರೋಪಿಗಳು ತಲೆ ಮರಿಸಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *