ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಗೆ ಗುಂಡಿಕ್ಕಿ ಕೊಲ್ಲಲು ಮುಂದಾದ ಪಾಗಲ್ ಪ್ರೇಮಿ

Public TV
1 Min Read

– ಗುಂಡೇಟಿನಿಂದ ಯುವತಿ ತಪ್ಪಿಸಿಕೊಂಡಿದ್ದಕ್ಕೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

ಲಕ್ನೋ: ಪ್ರೀತಿ ನಿರಾಕರಿಸಿದ್ದಕ್ಕೆ ಪಾಗಲ್ ಪ್ರೇಮಿಯೊಬ್ಬ ಯುವತಿಯನ್ನು ಗುಂಡಿಕ್ಕಿ ಕೊಲ್ಲಲು ಯತ್ನಿಸಿದ್ದಾನೆ. ಗುಂಡೇಟಿನಿಂದ ಯುವತಿ ತಪ್ಪಿಸಿಕೊಂಡಿದ್ದಕ್ಕೆ ಕೋಪಗೊಂಡ ಯುವಕ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದ ಗೋರಖ್‍ಪುರದಲ್ಲಿ ನಡೆದಿದೆ.

ಸಂಜೀವ್ ಜಾಯಸ್ವಾಲ್(25) ಆತ್ಮಹತ್ಯೆ ಮಾಡಿಕೊಂಡ ಯುವಕ. ಶುಕ್ರವಾರ ಬೆಳಗ್ಗೆ ಸಂಜೀವ್ ಯುವತಿಯ ಮನೆಗೆ ಹೋಗಿದ್ದಾನೆ. ಈ ವೇಳೆ ಯುವತಿ ಬಳಿ ತನ್ನ ಪ್ರೀತಿಯ ಬಗ್ಗೆ ಹೇಳಿದ್ದಾನೆ. ಯುವತಿ ಸಂಜೀವ್‍ನನ್ನು ಮನವರಿಕೆ ಮಾಡುತ್ತಿದ್ದಂತೆ ಆತ ಪಿಸ್ತೂಲಿನಿಂದ ಆಕೆಯ ಮೇಲೆ ಗುಂಡು ಹಾರಿಸಿದ್ದಾನೆ. ಇದನ್ನು ಗಮನಿಸಿದ ಯುವತಿ ತಕ್ಷಣ ಕೆಳಗೆ ಬಗ್ಗಿ ತನ್ನ ಪ್ರಾಣವನ್ನು ಉಳಿಸಿಕೊಂಡಳು. ಇದರಿಂದ ಕೋಪಗೊಂಡ ಸಂಜೀವ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಗುಂಡು ಹಾರಿಸಿಕೊಂಡ ತಕ್ಷಣ ಸಂಜೀವ್ ಮೃತಪಟ್ಟಿದ್ದನು. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಘಟನಾ ಸ್ಥಳಕ್ಕೆ ಧಾವಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ವರದಿಗಳ ಪ್ರಕಾರ, ಸಂಜೀವ್ ಸೂರತ್‍ನಲ್ಲಿ ಕೆಲಸ ಮಾಡುತ್ತಿದ್ದನು. ಆತನ ತಂದೆ ರಾಜೇಶ್ ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸಂಜೀವ್ ಒನ್ ಸೈಡ್ ಲವ್ ಆಗಿದ್ದು, ತನ್ನ ಸಂಬಂಧಿ ಯುವತಿಯನ್ನೇ ಪ್ರೀತಿಸುತ್ತಿದ್ದನು. ಯುವತಿಗೆ ಮದುವೆ ನಿಶ್ಚಯವಾದ ಸುದ್ದಿ ಕೆಲವು ದಿನಗಳ ಹಿಂದೆ ಸಂಜೀವ್‍ಗೆ ತಿಳಿಯಿತು.

ಯುವತಿಗೆ ಮದುವೆ ನಿಶ್ಚಯವಾಗಿದೆ ಎಂದ ತಿಳಿದ ತಕ್ಷಣ ಸಂಜೀವ್ ಸೂರತ್‍ನಿಂದ ಗೋರಖ್‍ಪುರಕ್ಕೆ ಬಂದಿದ್ದಾನೆ. ಯುವತಿ ತನ್ನ ಮಾವನ ಮನೆಯಲ್ಲಿ ಇರುವುದನ್ನು ತಿಳಿದ ಸಂಜೀವ್ ನೇರವಾಗಿ ಅಲ್ಲಿಯೇ ಹೋಗಿದ್ದಾನೆ. ಈ ವೇಳೆ ಸಂಜೀವ್ ತನ್ನ ಪ್ರೀತಿಯ ಬಗ್ಗೆ ಯುವತಿ ಬಳಿ ಹೇಳಿಕೊಂಡಿದ್ದಾನೆ. ಯುವತಿ ಸಂಜೀವ್ ಜೊತೆ ಸಮಾಧಾನದಿಂದ ಮಾತನಾಡುತ್ತಿದ್ದಂತೆ ಆತ ಪಿಸ್ತೂಲಿನಿಂದ ಆಕೆಯ ಮೇಲೆ ಗುಂಡು ಹಾರಿಸಿದ್ದಾನೆ. ಯುವತಿ ಗುಂಡೇಟಿನಿಂದ ತಪ್ಪಿಸಿಕೊಂಡಿದ್ದಕ್ಕೆ ಕೋಪಗೊಂಡ ಸಂಜೀವ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *