ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಕಾರ್ ಮೇಲೆ ಲಾರಿ ಬಿದ್ದು ಚಾಲಕ ಮೃತಪಟ್ಟ ಘಟನೆ ಬೆಂಗಳೂರಿನ ನಾಗವಾರ ಫ್ಲೈ ಓವರ್ ಬಳಿ ತಡರಾತ್ರಿ ನಡೆದಿದೆ.
ಪ್ರತಾಪ್(26) ಮೃತ ಕಾರ್ ಚಾಲಕ. ಪ್ರತಾಪ್ ಖಾಸಗಿ ಕಂಪನಿಯ ಕೆಲಸಗಾರರನ್ನು ಮನೆಗೆ ಡ್ರಾಪ್ ಮಾಡಲು ನಾಗವಾರ ಬಳಿ ತೆರಳುತ್ತಿದ್ದರು. ಅದೇ ಸಂದರ್ಭದಲ್ಲಿ ಅತಿಯಾದ ವೇಗದಲ್ಲಿ ಲಾರಿ ಬಂದಿದೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಲಾರಿ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯಾದ ಪರಿಣಾಮ ಪಕ್ಕದಲ್ಲೆ ಇದ್ದ ಕಾರ್ ಮೇಲೆ ಬಿದ್ದು ಪ್ರತಾಪ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆ ನಡೆದ ಬಳಿಕ ಲಾರಿ ಬಿಟ್ಟು ಚಾಲಕ ಎಸ್ಕೇಪ್ ಆಗಿದ್ದಾನೆ.
ಸದ್ಯ ಬಾಣಸವಾಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.