ಡೀಸೆಲ್ ಕದಿಯುತ್ತಿದ್ದ ಕಳ್ಳನನ್ನ ಹಿಡಿದು ಕೊಟ್ಟಿದ್ದಕ್ಕೆ ಲಾರಿ ಚಾಲಕನ ಕೊಲೆ!

Public TV
1 Min Read

ಬೆಂಗಳೂರು: ಡೀಸೆಲ್ ಕದಿಯುತ್ತಿದ್ದ ಕಳ್ಳನನ್ನು ಹಿಡಿದು ಕೊಟ್ಟಿದ್ದಕ್ಕೆ ಲಾರಿ ಚಾಲಕನ ಕೊಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ನಂದಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಆಂಧ್ರ ಪ್ರದೇಶ ಮೂಲದ ಶಂಕರ್(35) ಕೊಲೆಯಾದ ಲಾರಿ ಚಾಲಕ. ನಂದಗುಡಿ ಹೋಬಳಿ ಬೀರಹಳ್ಳಿಯಲ್ಲಿ ಚನ್ನಕೇಶವ ಸ್ಟೋನ್ ಜಲ್ಲಿ ಕ್ರಷರ್ ನಲ್ಲಿ ಕಳೆದ ಒಂದು ವರ್ಷದಿಂದ ಶಂಕರ್ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಎರಡು ತಿಂಗಳ ಹಿಂದೆ ಚಿಂತಾಮಣಿ ತಾಲೂಕು ಬಟ್ಲಹಳ್ಳಿ ಗ್ರಾಮದ ಶ್ರೀನಿವಾಸ್ ರೆಡ್ಡಿ ಕ್ರಷರ್ ನಲ್ಲಿ ಕಂಪೆನಿ ಇನ್ ಚಾರ್ಜ್ ಕೆಲಸಕ್ಕೆ ಸೇರಿಕೊಂಡಿದ್ದನು.

ಒಂದು ದಿನ ಈತ ಕೊಲೆಯಾದ ಶಂಕರ್ ಲಾರಿಯಲ್ಲಿ ಡೀಸೆಲ್ ಕದಿಯುತ್ತಿದ್ದಾಗ ಶಂಕರ್ ಕೈಗೆ ಸಿಕ್ಕಿ ಬಿದ್ದಿದ್ದನು. ಈ ವಿಚಾರವನ್ನು ಶಂಕರ್ ಮಾಲೀಕರಿಗೆ ತಿಳಿಸಿದ ಕಾರಣ ಮಾಲೀಕರು ಶ್ರೀನಿವಾಸ್ ರೆಡ್ಡಿಯನ್ನು ಕೆಲಸದಿಂದ ತೆಗೆದು ಹಾಕಿದ್ದರು. ಇದರಿಂದ ಕುಪಿತಗೊಂಡ ಶ್ರೀನಿವಾಸ ರೆಡ್ಡಿ, ತನ್ನ ಇತರೆ ಸಹಚರರೊಂದಿಗೆ ಗುರುವಾರ ರಾತ್ರಿ ಕ್ರಷರ್ ಕಂಪೆನಿಯ ಒಳಗೆ ವಾಸವಾಗಿದ್ದ ಶಂಕರನ್ನು ಹೊರಗೆ ಕರೆದು ಮಾರಾಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದಾರೆ.

ಈ ಸಂಬಂಧ ಕೊಲೆಯಾದ ಶಂಕರ್ ಬಾಮೈದ ಪವನ್ ನಂದಗುಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *