ಕಾರ್ಕಳದಲ್ಲಿ ಚೌಕಿದಾರ್ ಸ್ಟಿಕ್ಕರ್ ಹೈಡ್ರಾಮಾ – ಚುನಾವಣಾಧಿಕಾರಿಗಳ ಜೊತೆ ಲಾಯರ್ ವಾದ

Public TV
1 Min Read

ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಚೌಕಿದಾರ್ ಸ್ಟಿಕ್ಕರ್ ವಾರ್ ಜೋರಾಗಿದೆ. ಕಾರಿನ ಹಿಂದೆ ಚೌಕಿದಾರ್ ಶೇರ್ ಹೈ, ಮೈ ಬೀ ಚೌಕಿದಾರ್ ಸ್ಟಿಕ್ಕರ್ ಕಳೆದ ಒಂದು ವಾರದಿಂದ ಗದ್ದಲ ಎಬ್ಬಿಸುತ್ತಿದೆ. ಉಡುಪಿಯ ಕಾರ್ಕಳ ತಾಲೂಕಿನಲ್ಲಿ ತನ್ನ ಕಾರಿಗೆ ಚೌಕಿದಾರ್ ಸ್ಟಿಕ್ಕರ್ ಅಳವಡಿಕೆ ಮಾಡಿದ್ದ ವಿಫುಲ್ ತೇಜ್‍ಗೆ ಸ್ಟಿಕ್ಕರ್ ತೆರವು ಮಾಡುವಂತೆ ಚುನಾವಣಾ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ವಿಫುಲ್ ಸ್ಟಿಕ್ಕರ್ ತೆಗೆಯಲು ಹಿಂದೇಟು ಹಾಕಿದಾಗ ಪೊಲೀಸರ ಮಧ್ಯಪ್ರವೇಶ ಆಗಿದೆ. ವಾಹನ ಮಾಲೀಕ ಹಾಗೂ ಅಧಿಕಾರಿಗಳು, ಪೊಲೀಸರ ನಡುವೆ ಮಾತಿನ ಚಕಮಕಿಯಾಗಿದೆ. ಚುನಾವಣಾಧಿಕಾರಿಗಳ ಆದೇಶ ತೋರಿಸಿ ಎಂದು ಪಟ್ಟು ಹಿಡಿದ ವಿಫುಲ್‍ಗೆ ಅಧಿಕಾರಿಗಳು ಸಮಾಜದ ಸ್ವಾಸ್ಥ್ಯ ಕೆಡಿಸುವ ಬೆಳವಣಿಗೆಯ ಹಿನ್ನೆಲೆಯಲ್ಲಿ ಸ್ಟಿಕ್ಕರ್ ತೆಗೆಯಬೇಕು ಎಂದು ಸಮಜಾಯಿಷಿ ನೀಡಿದ್ದಾರೆ.

ಕಾನೂನು ರೀತಿಯಲ್ಲಿ ನೋಟಿಸ್ ನೀಡಿ ಎಂದು ವಾಹನ ಮಾಲೀಕ ಹೇಳಿದರೂ ಕೇಳದ ಅಧಿಕಾರಿಗಳು ಕಾರನ್ನು ವಶಕ್ಕೆ ಪಡೆದು ಕೊಂಡೊಯ್ದಿದ್ದಾರೆ.

ವಾರದ ಹಿಂದೆ ಉಡುಪಿಯಲ್ಲಿ ಅಂಟಿಸಿದ್ದ ಎಲ್ಲಾ ಸ್ಟಿಕ್ಕರ್ ತೆರವುಗೊಳಿಸಲಾಗಿತ್ತು. ಕಾಂಗ್ರೆಸ್ ಬೆಂಬಲಿಗರು ಅಂಟಿಸಿದ್ದ ಚೌಕಿದಾರ್ ಚೋರ್ ಹೆ ಸ್ಟಿಕ್ಕರ್ ಕೂಡಾ ಗೊಂದಲ ಸೃಷ್ಟಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *