15 ಕೋಟಿ ರೂ. ವಾಪಸ್ ಕೇಳಿದ್ದಕ್ಕೆ ಉದ್ಯಮಿಯಿಂದ ಅನಿಲ್ ಲಾಡ್‍ಗೆ ಜೀವ ಬೆದರಿಕೆ

Public TV
1 Min Read

ಬೆಂಗಳೂರು: ಬಳ್ಳಾರಿಯಲ್ಲಿ ಗಣಿಗಾರಿಕೆ ವಿಚಾರಕ್ಕೆ ನೀಡಿದ್ದ ಹಣವನ್ನು ಕೇಳಿದ್ದಕ್ಕೆ ಉದ್ಯಮಿಯೊಬ್ಬರು ಮಾಜಿ ಶಾಸಕ ಅನಿಲ್ ಲಾಡ್ ಅವರಿಗೆ ಜೀವ ಬೆದರಿಕೆ ಹಾಕಿದ್ದಾರೆ.

ಉದ್ಯಮಿ ಆರ್.ಶಿವಕುಮಾರ್ ನಿಂದ ಮಾಜಿ ಶಾಸಕ ಅನಿಲ್ ಲಾಡ್ ಗೆ ಜೀವ ಬೆದರಿಕೆ ಬಂದಿದೆ. ಹಣ ನೀಡದೆ ಸತಾಯಿಸಿ ಮತ್ತೊಮ್ಮೆ ಬಂದರೆ ಮರ್ಡರ್ ಮಾಡುವುದಾಗಿ ಶಿವಕುಮಾರ್ ಬೆದರಿಕೆ ಹಾಕಿದ್ದಾರೆ. ಈ ಕುರಿತು ಶಾಸಕರು ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಏನಿದು ಪ್ರಕರಣ?:
ಬಳ್ಳಾರಿ ಗಣಿಗಾರಿಕೆ ವಿಚಾರವಾಗಿ ಅನಿಲ್ ಲಾಡ್ ಮತ್ತು ಉದ್ಯಮಿ ಶಿವಕುಮಾರ್ ನಡುವೆ ಒಪ್ಪಂದವಾಗಿತ್ತು. ಅದರಂತೆ ಗಣಿಗಾರಿಕೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅನುಮತಿ ಸಿಕ್ಕ ಬಳಿಕ ಮಾರಾಟ ಮಾಡಲು ನಿರ್ಧರಿಸಲಾಗಿತ್ತು. ಹೀಗಾಗಿ ಅನಿಲ್ ಲಾಡ್ ಅವರು ಗಣಿಗಾರಿಕೆ ಕೆಲಸಕ್ಕೆ ಸುಮಾರು 15 ಕೋಟಿ ರೂ. ಮುಂಗಡವಾಗಿ ನೀಡಿದ್ದರು. ಒಂದು ವೇಳೆ ಗಣಿಗಾರಿಕೆಗೆ ಅನುಮತಿ ಸಿಗದಿದ್ದರೆ ಹಣ ವಾಪಾಸ್ ಕೊಡಬೇಕೆಂದು ಇಬ್ಬರು ಒಪ್ಪಂದ ಮಾಡಿಕೊಂಡಿದ್ದರು.

ಈ ನಡುವೆ ನನ್ನ ಹಣ ಮರಳಿ ಕೊಡಿ ಅಂತ ಅನಿಲ್ ಲಾಡ್ ಅವರು ಶಿವಕುಮಾರ್ ನನ್ನು ಕೇಳಿದ್ದಾರೆ. ಆದರೆ ಇದಕ್ಕೆ ಒಪ್ಪದ ಶಿವಕುಮಾರ್ ಹಣ ನೀಡದೆ ಸತಾಯಿಸಿ ಮತ್ತೊಮ್ಮೆ ಬಂದರೆ ಮರ್ಡರ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಅಷ್ಟೇ ಅಲ್ಲದೇ ಬಾಂಬೆಯಿಂದ ಸುಪಾರಿ ಕೊಟ್ಟು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಒಡ್ಡಿದ್ದಾರೆ. ಇದರಿಂದಾಗಿ ಶಾಸಕ ಅನಿಲ್ ಲಾಡ್, ಉದ್ಯಮಿ ಶಿವಕುಮಾರ್ ವಿರುದ್ಧ ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *