ಸಿಎಎ ವಿಚಾರದಲ್ಲಿ ಕಾಂಗ್ರೆಸ್ ನಿಲುವು ಸ್ಪಷ್ಟಪಡಿಸಲಿ: ಶೋಭಾ ಕರಂದ್ಲಾಜೆ

Public TV
1 Min Read

ಉಡುಪಿ: ಪಾಕ್ ಪರ ಪ್ರಗತಿಪರ ಹೋರಾಟಗಾರ್ತಿ ಅಮೂಲ್ಯ ಲಿಯೋನಾ ಘೋಷಣೆ ಕೂಗಿದ ವಿಷಯಕ್ಕೆ ಸಂಬಂಧಿಸಿದಂತೆ ಸಂಸದೆ ಶೋಭಾ ಆಕ್ರೋಶ ವ್ಯಕ್ತಪಡಿಸಿದರು. ಉಡುಪಿಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ಅಮೂಲ್ಯ ಪರ ಹೇಳಿಕೆ ನೀಡಿರುವ ಡಿಕೆ ಶಿವಕುಮಾರ್ ಅವರ ತನಿಖೆ ಕೂಡ ಆಗಬೇಕು. ಡಿಕೆ ಶಿವಕುಮಾರ್ ಅವರಿಗೂ ಅಮೂಲ್ಯಗೂ ಇರುವ ಸಂಬಂಧ ಏನು? ಅಮೂಲ್ಯ ಭಾಷಣ ಕಾಂಗ್ರೆಸಿಗರಿಗೆ ಗೊತ್ತಿತ್ತಾ ಎಂದು ಪ್ರಶ್ನಿಸಿದರು. ಸಿಎಎ ಹೋರಾಟದಲ್ಲಿ ಕಾಂಗ್ರೆಸ್ ಪಾತ್ರ ಏನು? ಸ್ಪಷ್ಟಪಡಿಸಿ ಎಂದರು.

ಅಮೂಲ್ಯ ತಂದೆಗೆ ನಕ್ಸಲ್ ನಂಟು ಇದೆ. ಅವರು ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದವರು. ವಾಜಿ ನಕ್ಸಲ್ ಮುಖಂಡ ಸಿರಿಮನೆ ನಾಗರಾಜ್ ಆಪ್ತ ಎಂದರು. ಬೆಂಗಳೂರಲ್ಲಿ ಎರೆಡೆರಡು ಘೋಷಣೆಗಳು ಪೂರ್ವನಿಯೋಜಿತವಾಗಿಯೇ ಬಂದಿದೆ. ಆಹ್ವಾನಿಸದೆ ಅಮೂಲ್ಯ ವೇದಿಕೆಗೆ ಹೇಗೆ ಬಂದಳು? ಮೈಕಿನಲ್ಲಿ ಹೇಗೆ ಮಾತನಾಡಿದಳು? ಆಯೋಜಕರೂ ಇದರಲ್ಲಿ ಶಾಮೀಲಿದ್ದಾರೆ. ಅವರನ್ನೂ ತನಿಖೆ ಮಾಡಬೇಕು ಎಂದರು.

ಕಾಂಗ್ರೆಸ್ ದೇಶ ವಿರೋಧಿ ನಿಲುವು ತಾಳುತ್ತಿದ್ಯಾ? ಮೋದಿ ವಿರೋಧಿಸುವ ಬರದಲ್ಲಿ ಕಾಂಗ್ರೆಸ್ ದೇಶದ ವಿರುದ್ಧ ಮಾತನಾಡುತ್ತಿದ್ಯಾ? ವೇದಿಕೆಯಲ್ಲಿ ಗುರುವಾರ ಸಂಸದ ಓವೈಸಿ ಕೂಡ ಇದ್ದರು. ಭಾರತದ ಜೊತೆ ಅವರು ಯಾವತ್ತೂ ಗುರುತಿಸಿಕೊಂಡೇ ಇಲ್ಲ. ಇದೀಗ ದೇಶ ಪ್ರೇಮದ ಮಾತುಗಳನ್ನಾಡಿದ್ರೆ ಜನ ನಂಬಲ್ಲ ಎಂದರು.

Share This Article
Leave a Comment

Leave a Reply

Your email address will not be published. Required fields are marked *