BJP, ಕಾಂಗ್ರೆಸ್‌ನವರು ಸಿಎಂ ಅಭ್ಯರ್ಥಿ ಘೋಷಣೆ ಮಾಡಲಿ – ಸಿ.ಎಂ ಇಬ್ರಾಹಿಂ ಸವಾಲ್

Public TV
2 Min Read

ಬೆಂಗಳೂರು: ಜೆಡಿಎಸ್‌ನಲ್ಲಿ (JDS) ಈ ಬಾರಿಯೂ ಕುಮಾರಸ್ವಾಮಿ ಅವರೇ ಸಿಎಂ ಅಭ್ಯರ್ಥಿ. ಬಿಜೆಪಿ-ಕಾಂಗ್ರೆಸ್‌ನವರು (Congress, BJP) ತಮ್ಮ ಪಕ್ಷದ ಸಿಎಂ ಅಭ್ಯರ್ಥಿಗಳನ್ನ ಘೋಷಣೆ ಮಾಡಲಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ (CM Ibrahim) ಸವಾಲ್ ಹಾಕಿದ್ದಾರೆ.

ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುರ್ಜೇವಾಲ ಅವರೇ ಕಾಂಗ್ರೆಸ್ ನಲ್ಲಿ ಸಿಎಂ ಅಭ್ಯರ್ಥಿ ಯಾರು ಅಂತಾ ಹೇಳಿ? ಸಿದ್ದರಾಮಯ್ಯನಾ, ಡಿಕೆಶಿನಾ, ಪರಮೇಶ್ವರ್ ಅವ್ರಾ ಅಂತ ಹೇಳಿ? ಬಿಜೆಪಿಯಲ್ಲೂ ಸಿಎಂ ಅಭ್ಯರ್ಥಿ ಯಾರು ಅಂತ ಗೊತ್ತಿಲ್ಲ. ಸುಮ್ಮನೆ ಬಸ್ ನಲ್ಲಿ ಜನರನ್ನ ಹತ್ತಿಸಿಕೊಂಡಿದ್ದಾರೆ ಅಷ್ಟೆ. ಜೆಡಿಎಸ್ ನಲ್ಲಿ ಕುಮಾರಸ್ವಾಮಿ ಅವರೇ ಸಿಎಂ ಅಭ್ಯರ್ಥಿ. ಇಲ್ಲಿ ಜನತಾದಳದ ಸಿದ್ಧಾಂತದ ಬೆಂಬಲಿಗರು ಅಷ್ಟೇ ಇರೋದು ಅಂತಾ ಕಿಡಿ ಕಾರಿದ್ದಾರೆ.

ಹೆಚ್.ಡಿ.ರೇವಣ್ಣ ಅವರು ಸಹ ಬೆಂಬಲ ಕೊಡಲ್ಲ ಅಂತಾ ಹೇಳಿಲ್ಲ. ಸ್ಥಳೀಯವಾಗಿ ಒಂದೆರಡು ಕ್ಷೇತ್ರಗಳಲ್ಲಿ ಸಮಸ್ಯೆ ಇದೆ. ಆದರೆ ಸಿಎಂ ವಿಚಾರದಲ್ಲಿ ಯಾವುದೇ ಅಸಮಾಧಾನ ಇಲ್ಲ. ಬಿಜೆಪಿ-ಕಾಂಗ್ರೆಸ್ ನಲ್ಲಿ ಚೀಫ್ ಮಿನಿಸ್ಟರ್ ಹೆಸರು ಹೇಳಿದ ತಕ್ಷಣ ಆ ಎರಡೂ ಪಕ್ಷಗಳಲ್ಲಿ ಒಡಕು ಉಂಟಾಗುತ್ತದೆ. ಆದ್ರೆ ನಮ್ಮಲ್ಲಿ ಯಾರಿಗೂ ಅಸಮಾಧಾನ ಇಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೋಲಾರದಲ್ಲಿ ಸಿದ್ದು ಸೋಲಿಸಲು ಬೂತ್ ಮಟ್ಟದಿಂದಲೇ ಖೆಡ್ಡಾ ತೋಡಲು ಬಿಜೆಪಿ ಸ್ಕೆಚ್‌

ಜನ ಕುಮಾರಸ್ವಾಮಿ ಅವರಿಗೆ ಆಶೀರ್ವಾದ ಮಾಡ್ತಿದ್ದಾರೆ. ಹಣ ಇಲ್ಲ, ಏನೂ ಇಲ್ಲ. ಆದರೂ ಜನ ಸೇರ್ತಾ ಇದ್ದಾರೆ. ವಾಲ್ಮೀಕಿ, ದಲಿತ, ಕುರುಬರ ಸಮಾಜ ಎದ್ದು ನಿಂತಿದೆ. ಎಲ್ಲರೂ ಕುಮಾರಸ್ವಾಮಿಗೆ ಮತ ಹಾಕ್ತಾರೆ ಅಂತ ತಿಳಿಸಿದ್ದಾರೆ.

ಇನ್ನೂ ಮೋದಿಯವರೇ (Narendra Modi) ಮುಸ್ಲಿಮರನ್ನೂ (Muslims) ಜೊತೆಗೆ ಕರೆದಕೊಂಡು ಹೋಗಿ ಅಂತ ಹೇಳಿದ್ದಾರಲ್ಲವಾ? ಮೋದಿ ಹೇಳಿಕೆಗೆ ವಿರೋಧ ಮಾಡುವ ಧೈರ್ಯ ಬಿಜೆಪಿ ನಾಯಕರಿಗೆ ಇದ್ಯಾ ಅಂತಾ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ಕಾವು ಪಡೆದ ರಾಜಕೀಯ – ಕನಕಪುರದ ಬಂಡೆ ಮದ್ದೂರಿನಲ್ಲಿ ಸ್ಪರ್ಧೆ?

ಇದೇ ವೇಳೆ ನಳಿನ್ ಕುಮಾರ್ ಕಟೀಲ್ (Nalin Kumar Kateel) ವಿರುದ್ಧವೂ ಕಿಡಿಕಾರಿದ ಇಬ್ರಾಹಿಂ, ಕಟೀಲ್ ಅವರೇ ನಿಮ್ಮ ಪಿಟೀಲನ್ನು ಬಿಜೆಪಿ ಕಚೇರಿಯಲ್ಲಿ ನುಡಿಸಿ. ಹೊರಗೆ ಬಂದು ಪಿಟೀಲು ನುಡಿಸಿದ್ರೆ, ಪಿಟೀಲು ಸಮೇತ ಜನ ನಿಮ್ಮನ್ನು ಹೊರ ಹಾಕ್ತಾರೆ ಎಂದು ಲೇವಡಿ ಮಾಡಿದ್ದಾರೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *