ಬೆಂಗಳೂರಿನ ಯೂನಿವರ್ಸಿಟಿ ಕ್ಯಾಂಪಸ್‌ನಲ್ಲಿ ಚಿರತೆ ಆತಂಕ

Public TV
1 Min Read

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ (Bengaluru University) ಚಿರತೆ (Leopard) ಕಾಣಿಸಿಕೊಂಡಿದೆ ಅನ್ನೋ‌ ಮಾತುಗಳು ಒಬ್ಬರಿಂದ ಒಬ್ಬರಿಗೆ ಹರಡಿ ಆತಂಕ‌ ಸೃಷ್ಟಿಯಾಗಿದೆ.

ತುರಹಳ್ಳಿ ಅರಣ್ಯ ಪ್ರದೇಶದಲ್ಲಿ ಚಿರತೆಯೊಂದು ಜಿಂಕೆ ಭೇಟೆಯಾಡಿದ ಬಳಿಕ ಬೆಂಗಳೂರು ಮತ್ತು ಬೆಂಗಳೂರಿನ (Bengaluru) ‌ಹೊರವಲಯದಲ್ಲಿ ಚಿರತೆಗಳ ಸಂಚಾರವಾಗ್ತಿರೋ ಬಗ್ಗೆ ಅನೇಕ‌ ಕಡೆ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಇದನ್ನೂ ಓದಿ: ಗುಜರಾತಿನಲ್ಲಿ ಸ್ಯಾಂಟ್ರೋ ರವಿ ಬಂಧನದ ಬಗ್ಗೆ ಅನುಮಾನಗಳಿವೆ: ಹೆಚ್.ಡಿ.ಕುಮಾರಸ್ವಾಮಿ

ಈಗ ಬೆಂಗಳೂರಿನ ಜ್ಞಾನ ಭಾರತಿ ಆವರಣದಲ್ಲಿ ಚಿರತೆ ಬಂದಿದೆ ಅನ್ನೋ ಕಾರಣಕ್ಕೆ ರಾತ್ರಿ 8 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಯೂನಿವರ್ಸಿಟಿಯಲ್ಲಿ ಪ್ರವೇಶ ಬಂದ್ ಮಾಡಲಾಗಿದೆ. ನಾಗರಭಾವಿಯಿಂದ ಕ್ಯಾಂಪಸ್‌ಗೆ ಸಂಪರ್ಕ ಕಲ್ಪಿಸೋ ರಸ್ತೆ ಬಂದ್ ಮಾಡಿದ್ದಾರೆ.

ಯಾರನ್ನೂ ರಸ್ತೆಯಲ್ಲಿ ಬಿಡದಂತೆ ಸೂಚನೆ ನೀಡಿದ್ದು, ಯಾವ ಗಾಡಿಗಳನ್ನು ಬಿಡದೆ ಪೊಲೀಸರು ಗೇಟೆ ಅನ್ನು ಕ್ಲೋಸ್ ಮಾಡಿದ್ದಾರೆ. ಜ್ಞಾನ ಭಾರತಿ ಪೊಲೀಸರಿಂದ ಗೇಟ್ ಬಂದ್ ಮಾಡಿ ವಾಹನ ಸಂಚಾರಕ್ಕೆ ನಿಷೇಧವನ್ನ ಹಾಕಿದ್ದಾರೆ. ಇದನ್ನೂ ಓದಿ: BJPಯಿಂದ ರಿಪೋರ್ಟ್‌ ಕಾರ್ಡ್ ಪಾಲಿಟಿಕ್ಸ್; ಜನರ ಮುಂದೆ ಡಬಲ್ ಇಂಜಿನ್ ಸರ್ಕಾರಗಳ ಸಾಧನಾ ವರದಿ ಅನಾವರಣಕ್ಕೆ ಮುಹೂರ್ತ ಫಿಕ್ಸ್

ಜೊತೆಗೆ ಸಂಜೆ ವೇಳೆಯಲ್ಲಿ ಒಂಟಿಯಾಗಿ ಕ್ಯಾಂಪಸ್‌ನಲ್ಲಿ ಓಡಾಡದಂತೆ ಸಾರ್ವಜನಿಕರಿಗೆ ಸೂಚನೆ ಸಹ ನೀಡಲಾಗಿದೆ. ಕ್ಯಾಂಪಸ್‌ನಲ್ಲಿ ಚಿರತೆ‌ ಇದೆಯಾ ಇಲ್ವಾ ಅನ್ನೋ ಅನುಮಾನ‌ ಕೂಡ ಶುರುವಾಗಿದೆ. ಇಲ್ಲಿವರೆಗೆ ಯಾರು ಸಹ ಚಿರತೆಯನ್ನ ನೋಡಿಲ್ಲ. ಅರಣ್ಯ ಸಿಬ್ಬಂದಿಗೂ ಚಿರತೆ ಸಂಚಾರ ಮಾಡಿದೆ ಅನ್ನೋ ಕುರುಹುಗಳು ಪತ್ತೆಯಾಗಿಲ್ಲ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *