ಕಂಬ ಏರಿ ವಿದ್ಯುತ್ ಶಾಕ್‍ಗೆ ಚಿರತೆ ಬಲಿ!

Public TV
1 Min Read

ಹೈದರಾಬಾದ್: ಕಂಬ ಏರಿ ವಿದ್ಯುತ್ ಶಾಕ್‍ನಿಂದ ಗಂಡು ಚಿರತೆಯೊಂದು ಮೃತಪಟ್ಟ ಘಟನೆ ಸೋಮವಾರ ತೆಲಂಗಾಣದಲ್ಲಿ ನಡೆದಿದೆ.

ನಿಜಮಾಬಾದ್ ಪಟ್ಟಣದಿಂದ 18ಕಿ.ಮೀ ದೂರದಲ್ಲಿದ್ದ ಬನ್ಸ್ವಾಡಗೆ ಹೋಗುವ ದಾರಿಯಲ್ಲಿರುವ ಕಂಬದಲ್ಲಿ ವಿದ್ಯುತ್ ತಂತಿಯ ಮೇಲೆ ಚಿರತೆಯ ಶವ ಪತ್ತೆಯಾಗಿದೆ.

ಚಿರತೆ ವಿದ್ಯುತ್ ಕಂಬದ ಮೇಲೆ ಇರುವ ದೃಶ್ಯವನ್ನು ನೋಡಿ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಕಂಬ ಏರಿದ್ದು ಹೇಗೆ?
ಚಿರತೆ ಮೃತಪಟ್ಟ ಸಮೀಪವೇ ಅರಣ್ಯ ಇದ್ದರೂ ಕಂಬ ಏರಿ ವಿದ್ಯುತ್ ಶಾಕ್ ಒಳಗಾಗಿ ಮೃತಪಟ್ಟ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಇದೂವರೆಗೂ ಈ ಪ್ರದೇಶದಲ್ಲಿ ಚಿರತೆ ಕಂಬ ಏರಿದ ಪ್ರಕರಣ ಎಲ್ಲಿಯೂ ದಾಖಲಾಗಿಲ್ಲ. ಹೀಗಾಗಿ ಬೇಟೆಗಾರರು ಚಿರತೆಯನ್ನು ಹತ್ಯೆ ಮಾಡಿ ವಿದ್ಯುತ್ ಕಂಬದ ಮೇಲೆ ಎಸೆದು ಹೋಗಿರಬಹುದು ಎನ್ನುವ ಶಂಕೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು, ಫಲಿತಾಂಶ ಬಳಿಕ ಚಿರತೆ ಸಾವಿನ ನಿಖರವಾದ ಕಾರಣ ಪತ್ತೆಯಾಗಲಿದೆ.

 

Share This Article
Leave a Comment

Leave a Reply

Your email address will not be published. Required fields are marked *