ದನ ತಿನ್ನಲು ಬಂದ ಚಿರತೆ ತನ್ನ ಮರಿಯನ್ನು ಬಿಟ್ಟು ಹೋಯ್ತು

Public TV
0 Min Read

ಹಾಸನ: ತೋಟದ ಮನೆಯಲ್ಲಿ ದನಕರು ತಿನ್ನಲು ಬಂದ ಚಿರತೆಯೊಂದು ತನ್ನಮರಿಯನ್ನು ಅಲ್ಲಿಯೇ ಬಿಟ್ಟು ಹೋಗಿರುವ ಘಟನೆ ಅರಸೀಕೆರೆ ತಾಲೂಕಿನ ಚಿಕ್ಕ ತಿರುಪತಿ ಗ್ರಾಮದಲ್ಲಿ ನಡೆದಿದೆ.

ಮೋಹನ್ ಎಂಬುವರ ತೆಂಗಿನ ತೋಟದಲ್ಲಿ ಚಿರತೆ ಮರಿ ಪತ್ತೆಯಾಗಿದೆ. ರಾತ್ರಿಯಿಂದ ಕಪ್ಪು ಬಣ್ಣದ ಚಿರತೆ ಮರಿಯೊಂದು ಕೂಗುತ್ತಿರುವ ಶಬ್ದ ತೋಟದಿಂದ ಕೇಳಿ ಬರುತಿತ್ತು. ಈ ಹಿನ್ನೆಯಲ್ಲಿ ಸ್ಥಳಕ್ಕೆ ಹೋಗಿ ನೋಡಿದಾಗ ಮರಿ ಚಿರತೆ ಇರುವುದು ಕಾಣಿಸಿದೆ.

ಚಿರತೆ ಮರಿಯು ತೋಟದ ಮಾಲೀಕರ ಬಳಿಯೇ ಇದ್ದು, ಈ ವಿಷಯವನ್ನ ಅರಣ್ಯ ಇಲಾಖೆಗೆ ತಿಳಿಸಿದ್ದರೂ ಕೂಡ ಈವರೆಗೂ ಯಾರು ಸ್ಥಳಕ್ಕೆ ಬಂದಿಲ್ಲ ಎಂದು ಅವರು ಆರೋಪಿಸಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *