ನೀವು ಬೆಂಗಳೂರಿಗೆ ಹೋದರೆ, ಕನ್ನಡ ಕಲಿಯಿರಿ: ಝೋಹೊ ಸಂಸ್ಥಾಪಕ ಶ್ರೀಧರ್ ವೆಂಬು

Public TV
1 Min Read

ಚೆನ್ನೈ: ನೀವು ಬೆಂಗಳೂರಿಗೆ (Bengaluru) ಹೋದರೆ, ಕನ್ನಡ (Kannada) ಕಲಿಯಿರಿ. ಮುಂಬೈಗೆ (Mumbai) ಹೋದರೆ, ಮರಾಠಿ ಕಲಿಯಿರಿ. ಉದ್ಯೋಗಿಗಳು ಭಾರತೀಯ ಭಾಷೆಗಳನ್ನು ಕಲಿಯುವುದನ್ನು  ಉತ್ತೇಜಿಸಬೇಕಿದೆ ಎಂದು ಝೋಹೊ ಸಂಸ್ಥಾಪಕ ಶ್ರೀಧರ್ ವೆಂಬು ( Zoho CEO Sridhar Vembu) ಹೇಳಿದ್ದಾರೆ.

ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಅನೇಕ ಯುರೋಪಿಯನ್ ದೇಶದಲ್ಲಿರುವ ಜನಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ನಮ್ಮ ರಾಜ್ಯ ಭಾಷೆಗಳನ್ನು ಮಾತನಾಡುತ್ತಾರೆ. ಭಾರತದ ಅಭಿವೃದ್ಧಿಯು ಕೇವಲ ನೀತಿ ಅಥವಾ ಪ್ರೋತ್ಸಾಹದ ಮೇಲೆ ಅವಲಂಬಿತವಾಗಿಲ್ಲ. ಬದಲಾಗಿ ಆಳವಾದ ಸಾಂಸ್ಕೃತಿಕ ಬದ್ಧತೆಯ ಮೇಲೆ ಅವಲಂಬಿತವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಇದನ್ನೂ ಓದಿ:  ಪೊಲಿಟಿಕಲ್‌ ಸೈನ್ಸ್‌ ಪದವಿಯ ಅಗತ್ಯವಿಲ್ಲ, ಇಂದು ಎಲೆಕ್ಟ್ರಿಷಿಯನ್‌ಗಳು, ಪ್ಲಂಬರ್‌ಗಳು ಅಗತ್ಯ ತುಂಬಾ ಇದೆ: ಮಸ್ಕ್‌ ವಾದಕ್ಕೆ Zoho ಸಿಇಒ ಒಪ್ಪಿಗೆ

ವಿಶೇಷವಾಗಿ ನಮ್ಮ ವಿದ್ಯಾವಂತರಲ್ಲಿ ನಾವು ಈ ರಾಷ್ಟ್ರಕ್ಕೆ ಸೇರಿದವರು ಎಂಬ ಭಾವನೆ ಬರಬೇಕು. ಆ ದೇಶಭಕ್ತಿಯ ಮನೋಭಾವ ಅತ್ಯಗತ್ಯ. ನೀವು ಗ್ರಾಮೀಣ ಭಾರತ ಅಥವಾ ನಮ್ಮ ಸಣ್ಣ ಪಟ್ಟಣಗಳನ್ನು ನೋಡಿದರೆ ರಾಷ್ಟ್ರಕ್ಕೆ ಸೇರಿದ್ದೇವೆ ಎಂಬ ಭಾವನೆ ಇನ್ನೂ ತುಂಬಾ ಜೀವಂತವಾಗಿದೆ. ಆದರೆ ದುರದೃಷ್ಟವಶಾತ್ ನಮ್ಮ ಅತಿಶಿಕ್ಷಿತ ಗಣ್ಯರಲ್ಲಿ ಅದು ಸ್ವಲ್ಪ ಕಾಣೆಯಾಗಿದೆ ಎಂದರು.

ಬಹುತೇಕ ವಿದ್ಯಾವಂತರಲ್ಲಿ ನಾವು ʼಗ್ಲೋಬಲ್‌ ಸಿಟಿಜನ್‌ʼ ಎಂಬ ಮನಸ್ಥಿತಿಯಿದೆ. ಈ ಮನಸ್ಥಿತಿ ರಾಷ್ಟ್ರದ ಅಭಿವೃದ್ಧಿಯನ್ನು ದುರ್ಬಲಗೊಳಿಸುತ್ತದೆ. ಈ ಅಪಾಯಕಾರಿ ಮನಸ್ಥಿತಿ ಬದಲಾಗಬೇಕು. ಚೀನಾ ಮತ್ತು ಜಪಾನ್‌ನಲ್ಲಿ ಈ ರೀತಿಯ ಮನೋಭಾವ ಇಲ್ಲ. ದೇಶಭಕ್ತಿಯ ಕಾರಣದಿಂದಾಗಿ ಈ ದೇಶಗಳು ಬೆಳವಣಿಗೆ ಸಾಧಿಸಿವೆ ಎಂದು ತಿಳಿಸಿದರು.

Share This Article