ಮುಸ್ಲಿಮರಿಗೆ ಸಂಪೂರ್ಣ ಮೀಸಲಾತಿ ಸಿಗಬೇಕು: ಲಾಲೂ ಪ್ರಸಾದ್ ಯಾದವ್

Public TV
1 Min Read

– ಆರ್‍ಜೆಡಿ ಮುಖ್ಯಸ್ಥನ ವಿರುದ್ಧ ಮೋದಿ ಕಿಡಿ

ಪಾಟ್ನಾ: ಮುಸ್ಲಿಮ್ ಮೀಸಲಾತಿ ರಾಜಕೀಯ ಜೋರಾಗಿದೆ. ಎಲ್ಲಾ ಮೀಸಲಾತಿಯನ್ನು ಮುಸ್ಲಿಮರಿಗೆ ಕೊಡ್ಬೇಕು ಎಂದು ಆರ್‍ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಹೇಳಿದ್ದಾರೆ ಎನ್ನಲಾದ ವೀಡಿಯೋ ವೈರಲ್ ಆಗಿದೆ. ಇದು ಭಾರೀ ವಿವಾದಕ್ಕೆ ಕಾರಣವಾಗಿದೆ.

ಪ್ರಧಾನಿ ಮೋದಿಯವರು (Narendra Modi) ಐಎನ್‍ಡಿಐಎ ಒಕ್ಕೂಟದ ನಾಯಕರೊಬ್ರು ಎಲ್ಲಾ ಮೀಸಲಾತಿ ಮುಸ್ಲಿಮರಿಗೆ ಸಿಗಬೇಕು ಎಂದಿದ್ದಾರೆ. ಇಂತಹ ಹೇಳಿಕೆ ನೀಡಿದ್ರೂ ಕಾಂಗ್ರೆಸ್ ಸುಮ್ಮನಿದೆ ಅಂದ್ರೆ ಆ ಒಕ್ಕೂಟದ ಆಶಯ ಎಸ್‍ಸಿ-ಎಸ್‍ಟಿ ಮೀಸಲಾತಿ ಕಿತ್ತು ಮುಸ್ಲಿಮರಿಗೆ ನೀಡುವುದೇ ಆಗಿದೆ ಅಂತಲೇ ಅರ್ಥ ಎಂದು ಕುಟುಕಿದ್ದಾರೆ. ಇದನ್ನೂ ಓದಿ: NDAಗೆ 400ಕ್ಕೂ ಹೆಚ್ಚು ಸೀಟುಗಳು ಯಾಕೆ ಬೇಕು..?: ಪ್ರಚಾರದಲ್ಲಿ ಮೋದಿ ರಿವೀಲ್‌

ಈ ನಡುವೆ ಕರ್ನಾಟಕ ಬಿಜೆಪಿ ಹಂಚಿಕೊಂಡಿದ್ದ ಮೀಸಲಾತಿ ಕುರಿತ ವೀಡಿಯೋವನ್ನು ತೆಗೆದು ಹಾಕುವಂತೆ ಟ್ವಿಟ್ಟರ್‍ಗೆ ಚುನಾವಣಾ ಆಯೋಗ ಸೂಚನೆ ನೀಡಿದೆ. ಇದೇ ವೇಳೆ ದೇಶದಲ್ಲಿ ವಿಧ್ವಂಸಕ ಕೃತ್ಯ ನಡೆಸಿದ ಉಗ್ರರಿಗೆ ಕಾಂಗ್ರೆಸ್ ಕ್ಲೀನ್‍ಚಿಟ್ ಕೊಡ್ತಿದೆ ಅಂತಾನೂ ಮೋದಿ ಆರೋಪಿಸಿದ್ದಾರೆ. ಇದಕ್ಕೆ ಸೋನಿಯಾ ಗಾಂಧಿ ಪ್ರತಿಕ್ರಿಯಿಸಿ, ದೇಶದಲ್ಲಿ ರಾಜಕೀಯ ಲಾಭಕ್ಕಾಗಿ ಜಾತಿಗಳ ಮಧ್ಯೆ ವೈಷಮ್ಯ ಮೂಡಿಸಲಾಗ್ತಿದೆ ಅಂತ ಕಳವಳ ವ್ಯಕ್ತಪಡಿಸಿದ್ದಾರೆ.

Share This Article