ವೇತನ ಸರಿಯಾಗಿ ನೀಡದ ಮಾಲೀಕನ ಮರ್ಸಿಡಿಸ್ ಕಾರನ್ನೇ ಸುಟ್ಟ ಕಾರ್ಮಿಕ

Public TV
1 Min Read

ಲಕ್ನೋ: ಸಂಬಳವನ್ನು ಸರಿಯಾಗಿ ನೀಡದ ಮಾಲೀಕನಿಗೆ ಬುದ್ಧಿ ಕಲಿಸಲು ಮಾಲೀಕನ ಮರ್ಸಿಡಿಸ್(Mercedes) ಕಾರನ್ನೇ ಕಾರ್ಮಿಕನೊಬ್ಬ(Labourer) ಸುಟ್ಟ ಘಟನೆ ನೋಯ್ಡಾದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಗೌತಮ್ ಬುದ್ಧ ನಗರದಲ್ಲಿ ನೋಯ್ಡಾದಿಂದ(Noida) ಈ ಘಟನೆ ನಡೆದಿದೆ. ರಣವೀರ್ ಐಷಾರಾಮಿ ಕಾರನ್ನು(Car) ಸುಟ್ಟ ವ್ಯಕ್ತಿ. ಈತ ಮಾಲೀಕನ ಮನೆಗೆ ಟೈಲ್ಸ್ ಅಳವಡಿಸಿದ್ದನು. ಆದರೆ ರಣವೀರ್‌ಗೆ ಮಾಲೀಕ ಪೂರ್ಣ ಸಂಬಳ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಬೇಸರಗೊಂಡ ರಣವೀರ್ ಮಾಲೀಕನ ಐಷಾರಾಮಿ ಕಾರನ್ನು ಸುಟ್ಟು ತನ್ನ ಸೇಡನ್ನು ತೀರಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಕಾರಿಗೆ ಬೆಂಕಿ ಹಚ್ಚಿ ರಣವೀರ್ ಪರಾರಿಯಾಗಿದ್ದಾನೆ. ಇದೀಗ ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೀಡಿಯೋದಲ್ಲಿ ಏನಿದೆ?: ರಣವೀರ್ ಬೈಕ್‍ನಲ್ಲಿ ಬಂದು ಕಾರಿನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಬೆಂಕಿ ಕಾರಿಗೆ ಹತ್ತುದ್ದಿದ್ದಂತೆ ರಣವೀರ್ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಘಟನೆ ನೋಯ್ಡಾದ ಸದರ್‍ಪುರದಲ್ಲಿ ನಡೆದಿದ್ದು, ಇಡೀ ಘಟನೆ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಮೇಲ್ಜಾತಿಯ ಜನರಿಗೆ ಸೇರಿದ ಮಡಿಕೆಯಿಂದ ನೀರು ಕುಡಿದ ದಲಿತನ ಮೇಲೆ ಹಲ್ಲೆ

ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ ಘಟನೆಗೆ ಸಂಬಂಧಿಸಿ ರಣವೀರ್‌ನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮರ್ಸಿಡಿಸ್ ಮಾಲೀಕರು ನೀಡಿದ ದೂರಿನ ನಂತರ ಅವರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಶಾಲೆಗೆ ನುಗ್ಗಿ ಶಿಕ್ಷಕಿ ಮೇಲೆ ಕುಡುಕನಿಂದ ಹಲ್ಲೆ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *