`ಕುರುಕ್ಷೇತ್ರ’ ಸಿನಿಮಾದ ಫೋಟೋ ಶೂಟ್ ಹೇಗಿದೆ ಗೊತ್ತಾ…?

Public TV
1 Min Read

ಬೆಂಗಳೂರು: ಅಕ್ಕ-ಪಕ್ಕದ ಇಂಡಸ್ಟ್ರೀಯ ತನಕ ಸದ್ದು ಮಾಡುತ್ತಿರುವ ಸ್ಯಾಂಡಲ್‍ವುಡ್‍ನ ಸಿನಿಮಾ ಅಂದರೆ ಅದು `ಕುರುಕ್ಷೇತ್ರ’ ಸಿನಿಮಾ. ಅಭಿಮಾನಿಗಳಂತೂ ಈ ಚಿತ್ರ ಹೇಗಿರುತ್ತೆ ಅನ್ನುವ ಕಲ್ಪನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಅಷ್ಟರ ಮಟ್ಟಿಗೆ ಈ ಸಿನಿಮಾ ಎಲ್ಲರಿಗೆ ಕುತುಹಲ ಮೂಡಿಸಿದೆ. ಯಾಕೆಂದ್ರೆ ಈ ಸಿನಿಮಾದಲ್ಲಿನ ಪಾತ್ರವರ್ಗವೇ ಹಾಗಿದೆ. ಸ್ಯಾಂಡಲ್‍ವುಡ್‍ನ ಘಟನೂ-ಘಟಿ ಕಲಾವಿದರು ಈ ಚಿತ್ರಕ್ಕಾಗಿ ಬಣ್ಣಹಚ್ಚಲಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ದುರ್ಯೋಧನನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಅವರ 50ನೇ ಚಿತ್ರವಾಗಿದೆ. ದರ್ಶನ್ ಅವರ ದುರ್ಯೋಧನ ಪಾತ್ರದ ಫೋಟೋ ಶೂಟ್ ಇದಾದ್ರೆ, ಇನ್ನು ಜಾಗ್ವಾರ್ ಖ್ಯಾತಿಯ ನಿಖಿಲ್ ಕುಮಾರ್ ಅವರು ಈ ಚಿತ್ರದಲ್ಲಿ ಅಭಿಮಾನ್ಯು ಪಾತ್ರವನ್ನ ಮಾಡಲಿದ್ದಾರೆ.

 

ಈ ಚಿತ್ರಲ್ಲಿ ರೆಬಲ್ ಸ್ಟಾರ್ ಅಂಬರೀಶ್, ಕ್ರೇಜಿಸ್ಟಾರ್ ರವಿಚಂದ್ರನ್, ಆ್ಯಕ್ಷನ್-ಕಿಂಗ್ ಅರ್ಜುನ್ ಸರ್ಜಾ, ಡೈಲಾಗ್ ಕಿಂಗ್ ಸಾಯಿಕುಮಾರ್, ಶಶಿಕುಮಾರ್, ಆರ್ಮುಗಂ ಖ್ಯಾತಿಯ ರವಿಶಂಕರ್, ಶ್ರೀನಿವಾಸ್ ಮೂರ್ತಿ ಹಾಗೂ ಪ್ರಣಯಾ ರಾಜ ಶ್ರೀನಾಥ್ ಕುರುಕ್ಷೇತ್ರದಲ್ಲಿ ಕಾಣಿಸಿಕೊಳ್ಳುವುದು ಪಕ್ಕಾ ಎಂದು ಫೋಟೋ ಶೂಟ್ ಹೇಳುತ್ತಿದೆ.

ದ್ರೌಪದಿ ಪಾತ್ರದಲ್ಲಿ ಬಹುಭಾಷ ನಟಿ ಸ್ನೇಹ ಕಂಗೊಳಿಸೊದು ಖಚಿತವಾಗಿದೆ. ಜೊತೆಗೆ ನೀರ್‍ದೊಸೆ ಬೆಡಗಿ ಹರಿಪ್ರಿಯಾ, ಹಿರಿಯ ನಟಿ ಲಕ್ಷ್ಮೀ, ಪವಿತ್ರಾ ಲೋಕೇಶ್ ಕೂಡ ಈ `ಕುರುಕ್ಷೇತ್ರ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸ್ಯಾಂಡಲ್‍ವುಡ್‍ನ ಖ್ಯಾತ ನಿರ್ಮಾಪಕ ಮುನ್ನಿರತ್ನ ಅವರ ಕನಸಿಕ ಸಿನಿಮಾ `ಕುರುಕ್ಷೇತ್ರ ಬರೋಬ್ಬರಿ 50 ರಿಂದ 60ಕೋಟಿ ವೆಚ್ಚದಲ್ಲಿ ವೃಷಭಾದ್ರಿ ಪ್ರೊಡಕ್ಷನ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ನೂತನ ತಂತ್ರಜ್ಞನದಲ್ಲಿ ಬಾಹುಬಲಿ ಚಿತ್ರಕ್ಕಾಗಿ ದುಡಿದ ತಂತ್ರಜ್ಞಾನಿಗಳ ಕೈಚಳದಲ್ಲಿ ಕನ್ನಡದ ಕುರುಕ್ಷೇತ್ರ ಮೂಡಲಿದೆ.

ಈ ತಿಂಗಳ 6ನೇ ತಾರೀಖು ಸ್ಯಾಂಡಲ್‍ವುಡ್‍ನ ಸ್ಟಾರ್ ಸೆಲಬ್ರಿಟಿಗಳ ಜೊತೆಗೆ ರಾಜ್ಯದ ನಾನಾ ರಾಜಕೀಯ ಗಣ್ಯ ಮಹೋದರ ಸಮ್ಮುಖದಲ್ಲಿ ಈ ಚಿತ್ರಕ್ಕೆ ಚಾಲನೆ ಸಿಗಲಿದೆ.

 

Share This Article
Leave a Comment

Leave a Reply

Your email address will not be published. Required fields are marked *