ಐಪಿಎಲ್‌ನಲ್ಲಿ ಕೆಟ್ಟ ಅಂಪೈರಿಂಗ್‌ ಸದ್ದು: ಹಾಲಿ, ಮಾಜಿ ಕ್ರಿಕೆಟರ್ಸ್‌ ಕೆಂಡಾಮಂಡಲ – ಯಾರು ಏನ್‌ ಹೇಳ್ತಾರೆ?

Public TV
3 Min Read

ನವದೆಹಲಿ: ರಾಜಸ್ಥಾನ್‌ ರಾಯಲ್ಸ್‌ (Rajasthan Royals) ವಿರುದ್ಧ ಮಂಗಳವಾರ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ತಂಡ 20 ರನ್‌ಗಳ ಅಮೋಘ ಜಯ ಸಾಧಿಸಿತ್ತು. ಆದ್ರೆ ಜಿದ್ದಾ ಜಿದ್ದಿ ಕಣದಲ್ಲಿ ರಾಜಸ್ಥಾನ್ ರಾಯಲ್ಸ್‌ ತಂಡದ ನಾಯಕ ಸಂಜು ಸ್ಯಾಮ್ಸನ್‌ ಔಟ್‌ ಆದ ಬಗೆ ಈಗ ವಿವಾದಕ್ಕೆ ಕಾರಣವಾಗಿದೆ.

ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ರಾಜಸ್ಥಾನ್‌ ಪರ ನಾಯಕ ಸಂಜು ಸ್ಯಾಮ್ಸನ್‌ (Sanju Samso) ಸ್ಫೋಟಕ ಬ್ಯಾಟಿಂಗ್‌ ನಡೆಸುತ್ತಿದ್ದರು. 45 ಎಸೆತಗಳಲ್ಲಿ 8 ಫೋರ್‌ ಮತ್ತು 6 ಸಿಕ್ಸರ್‌ಗಳೊಂದಿಗೆ 86 ರನ್‌ ಸಿಡಿಸಿದ್ದ ಸ್ಯಾಮ್ಸನ್‌ 86 ರನ್‌ ಗಳಿಸಿದ್ದರು. ಸಂಜು ಅವರ ಸ್ಫೋಟಕ ಇನ್ನಿಂಗ್ಸ್‌ ತಂಡದಲ್ಲಿ ಗೆಲುವಿನ ಭರವಸೆ ಮೂಡಿಸಿತ್ತು. ಆದರೆ, 16ನೇ ಓವರ್‌ನ 4ನೇ ಎಸೆತದಲ್ಲಿ ವೇಗದ ಬೌಲರ್‌ ಮುಕೇಶ್‌ ಕುಮಾರ್‌ ಅವರ ಎಸೆತವನ್ನು ಲಾಂಗ್‌ ಆನ್‌ ಕಡೆಗೆ ಸಿಕ್ಸರ್‌ ಬಾರಿಸಲು ಪ್ರಯತ್ನಿಸಿದರು. ಆದ್ರೆ ಬೌಂಡರಿ ಗೆರೆಯ ಬಳಿ ಫೀಲ್ಡರ್‌ ಶಾಯ್‌ ಹೋಪ್‌ (Shai Hope) ಕ್ಯಾಚ್ ತಗೆದುಕೊಂಡರು. ಆದರೆ, ಅವರ ಕಾಲು ಬೌಂಡರಿ ಗೆರೆಗೆ ತಾಕಿರುವ ಸಾಧ್ಯತೆಗಳೂ ಹೆಚ್ಚಾಗಿ ಕಂಡುಬಂದಂತೆ ಇತ್ತು. ಟಿವಿ ಅಂಪೈರ್‌ ಎರಡು ಮೂರು ಆಂಗಲ್‌ಗಳಲ್ಲಿ ಬೌಂಡರಿ ಗೆರೆಗೆ ಶೂಗಳು ಟಚ್‌ ಆಗಿದೆಯೇ ಎಂಬುದನ್ನು ಪರಿಶೀಲಿಸಿದರು. ಬಳಿಕ ಟಿವಿ ಅಂಪೈರ್‌ ಔಟ್ ತೀರ್ಪು ನೀಡಿದರು. ಇದನ್ನೂ ಓದಿ: ನೋವಿನಿಂದ ಬಳಲುತ್ತಿದ್ದರೂ ಸಿಎಸ್‌ಕೆಗಾಗಿ ಆಡ್ತಿದ್ದಾರೆ ಧೋನಿ – ಮಹಿಗೆ ಇರೋ ಆರೋಗ್ಯ ಸಮಸ್ಯೆ ಏನು?

ಗ್ರೌಂಡ್‌ನಲ್ಲೇ ವಾಗ್ವಾದಕ್ಕಿಳಿದ ಸಂಜು:
ಔಟ್‌ ತೀರ್ಪು ಹೊರ ಬೀಳುತ್ತಿದ್ದಂತೆಯೇ ಅಸಮಾಧಾನಗೊಂಡ ಸಂಜು ಅಂಪೈರ್‌ ಜೊತೆಗೆ ವಾಗ್ವಾದ ನಡೆಸಿದರು. ಬಳಿಕ ಪೆವಿಲಿಯನ್‌ಗೆ ಮರಳಿದರು. ಸಂಜು ಸ್ಯಾಮ್ಸನ್‌ ನಿರ್ಗಮನದ ಬಳಿಕ ಆರ್‌ಆರ್‌ ತಂಡದ ಮುಖ್ಯ ಕೋಚ್‌ ಕುಮಾರ ಸಂಗಕ್ಕಾರ ಕೂಡ ಡಗೌಟ್‌ನಲ್ಲಿ ಅಸಮಾಧಾನ ಹೊರಹಾಕಿದ್ದರು. ನಂತರ ಅಂಪೈರ್‌ ವಿರುದ್ಧ ನೆಟ್ಟಿಗರು ಫುಲ್‌ ಕ್ಲಾಸ್‌ ತೆಗೆದುಕೊಂಡರು. 2024 ಟೂರ್ನಿಯಲ್ಲಿ ಅಂಪೈರ್‌ಗಳಿಂದ ಆಗುತ್ತಿರುವ ಸಾಲು ಸಾಲು ತಪ್ಪುಗಳನ್ನು ಎತ್ತಿ ತೋರಿಸಿದರು. ಅಂಪೈರ್‌ ಕೇವಲ ಒಂದು ಮೂಲೆಯ ಕ್ಯಾಮೆರಾ ವಿಡಿಯೋ ಮಾತ್ರವೇ ವೀಕ್ಷಿಸಿದ್ದು, ಮತ್ತೊಂದು ತುದಿಯ ಕ್ಯಾಮೆರಾದ ವಿಡಿಯೋ ನೋಡಿದ್ದರೆ ಕಾಲು ಗೆರೆಗೆ ತಾಗಿರುವುದು ಕಾಣಿಸುತ್ತಿತ್ತು ಎಂಬುದು ಅಭಿಮಾನಿಗಳ ವಾದವಾಗಿದೆ. ಸಂಜು ವಿಕೆಟ್‌ ಪತನದ ಬಳಿಕ ರನ್‌ ವೇಗ ಕುಂಟಿತಗೊಂಡು ರಾಜಸ್ಥಾನ ತಂಡ ಸೋಲಿಗೆ ತುತ್ತಾಯಿತು.

ಬೌಂಡರಿ ಲೈನ್‌ಗೆ ತಾಕಿತ್ತು: ಸಿಧು
ಈ ಕುರಿತು ಮಾತನಾಡಿದ ಮಾಜಿ ಕ್ರಿಕೆಟಿಗ ನವಜ್ಯೋತ್‌ ಸಿಂಗ್‌ ಸಿಧು, ಸಂಜು ಸ್ಯಾಮ್ಸನ್‌ ಅವರ ಔಟ್‌ ನಿರ್ಧಾರ ಆಟದ ದಿಕ್ಕನ್ನೇ ಬದಲಿಸಿತು.‌ ಅಂಪೈರ್‌ ಲೈನ್‌ನ ಮತ್ತೊಂದು ಭಾಗವನ್ನೂ ಎರಡು ಬಾರಿ ನೋಡಬೇಕಿತ್ತು ಎಂದು ಹೇಳಿದ್ದಾರೆ. ಇದನ್ನೂ ಓದಿ: ಡೆಲ್ಲಿ, ರಾಜಸ್ಥಾನ ಪಂದ್ಯದ ವೇಳೆ ಆಪ್ ಕಾರ್ಯಕರ್ತರಿಂದ ಪ್ರತಿಭಟನೆ – ಹಲವರು ವಶಕ್ಕೆ

ಅಂಪೈರ್‌ ತೀರ್ಪಿಗೆ ಬದ್ಧರಾಗಿರಬೇಕು: ಸಂಗಕ್ಕಾರ
ಸಂಜು ಔಟ್‌ ಕುರಿತು ಪ್ರತಿಕ್ರಿಯೆ ನೀಡಿದ ಮೆಂಟರ್‌ ಕುಮಾರ ಸಂಗಕ್ಕಾರ, ಕೆಲವೊಂದು ಪಂದ್ಯಗಳಲ್ಲಿ ಅಂಪೈರ್‌ಗಳು ನೋಡುವ ದೃಷ್ಟಿಕೋನದ ಮೇಲೆ ತೀರ್ಪು ನಿರ್ಧಾರವಾಗುತ್ತವೆ. ಕೊನೆಯಲ್ಲಿ 3ನೇ ಅಂಪೈರ್‌ ತೀರ್ಪಿಗೆ ಬದ್ಧರಾಗಿರಬೇಕು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: Champions Trophy: ಕೇಂದ್ರ ಸರ್ಕಾರ ಅನುಮತಿ ಕೊಟ್ಟರೆ ಭಾರತ ತಂಡವನ್ನು ಪಾಕ್‌ಗೆ ಕಳುಹಿಸುತ್ತೇವೆ: ಬಿಸಿಸಿಐ

ಕೆಟ್ಟ ಅಂಪೈರಿಂಗ್: ಸಂಜು
ಪಂದ್ಯದ ಬಳಿಕ ಪೋಸ್ಟ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಸಂಜು, ಗೆಲುವು ನಮ್ಮ ಕೈಲಿತ್ತು. ಓವರ್‌ಗೆ 11-12 ರನ್‌ಗಳ ಅಗತ್ಯವಿತ್ತಷ್ಟೆ. ಆದರೆ, ಐಪಿಎಲ್‌ ಪಂದ್ಯದಲ್ಲಿ ಈ ರೀತಿಯ ಸೋಲೆದುರಾಗುತ್ತವೆ. ಇಲ್ಲಿನ ಪಿಚ್‌ನಲ್ಲಿ ನಾವು 10 ರನ್‌ ಹೆಚ್ಚು ಬಿಟ್ಟುಕೊಟ್ಟೆವು. ಕೆಲ ಬೌಂಡರಿಗಳನ್ನು ತಡೆದಿದ್ದರೆ ಗುರಿ ಕಡಿಮೆ ಆಗಿರುತ್ತಿತ್ತು. ಇನ್ನು ಅಂಪೈರಿಂಗ್‌ ಕೂಡ ಕೆಟ್ಟದಾಗಿತ್ತು. ಸೋಲಿಗೆ ಕಾರಣಗಳನ್ನು ಹುಡುಕಿ ಅದನ್ನು ಸರಿಪಡಿಸಿಕೊಂಡು ಮುನ್ನುಗ್ಗುವ ಕಡೆಗೆ ಎದುರು ನೋಡುತ್ತಿದ್ದೇವೆ ಎಂದು ಹೇಳಿದರು.

Share This Article