KSRTC ಟಿಕೆಟ್ ವಿತರಣ ಯಂತ್ರ ಸ್ಫೋಟ – ಸುಟ್ಟುಹೋದ ಕಂಡಕ್ಟರ್ ಕೈ

Public TV
1 Min Read

ತಿರುವನಂತಪುರಂ: KSRTC ಬಸ್‍ನ ಟಿಕೆಟ್ ವಿತರಣ ಯಂತ್ರ ಸ್ಫೋಟಗೊಂಡು ಕಂಡಕ್ಟರ್ ಗಾಯಗೊಂಡಿರುವ ಘಟನೆ ಕೇರಳದಲ್ಲಿ ವರದಿಯಾಗಿದೆ.

ರಾಜ್ಯ ಸಾರಿಗೆ ನಿಗಮದ ಬಸ್‍ನಲ್ಲಿ ಕಂಡೆಕ್ಟರ್ ಆಗಿ ಕೆಲಸ ನಿರ್ವಹಿಸುವ ಪೆರುಂಬೂರ್ ನಿವಾಸಿ ಎಂ.ಎಂ ಮೊಹಮ್ಮದ್ ಟಿಕೆಟ್ ವಿತರಣ ಯಂತ್ರ ಸ್ಫೋಟದಿಂದ ಗಾಯಗೊಂಡಿದ್ದಾರೆ. ತಿರುವನಂತಪುರಂ-ಸುಲ್ತಾನ್ ಬತ್ತೇರಿ ಸೂಪರ್ ಡಿಲಕ್ಸ್ ಬಸ್‍ನ ಕಂಡಕ್ಟರ್ ಮೊಹಮ್ಮದ್ ವಿಶ್ರಾಂತಿ ಕೊಠಡಿಯಲ್ಲಿ ಇರುವ ವೇಳೆ ಯಂತ್ರ ಸ್ಫೋಟಗೊಂಡಿದೆ. ಈ ವೇಳೆ ಕಂಡಕ್ಟರ್ ಕೈಗೆ ಸುಟ್ಟ ಗಾಯಗಳಾಗಿದ್ದು. ಯಂತ್ರ ಸುಟ್ಟು ಕರಕಲಾಗಿದೆ. ಬತ್ತೇರಿ ಡಿಪೋಗೆ ಸೇರಿದ ಟಿಕೆಟ್ ವಿತರಣ ಯಂತ್ರ, ಮೈಕ್ರೋಎಫ್‍ಎಕ್ಸ್ ಕಂಪನಿಗೆ ಸೇರಿದ್ದಾಗಿದೆ. ಇದನ್ನೂ ಓದಿ: ಗೋಣಿ ಚೀಲ ಒಣಗಿಸುವ ವಿಚಾರಕ್ಕೆ ಮಹಿಳೆಗೆ ಮಚ್ಚಿನೇಟು

ಶಾರ್ಟ್ ಸರ್ಕ್ಯೂಟ್‌ನಿಂದ ಯಂತ್ರ ಸ್ಫೋಟಗೊಂಡಿದೆ ಎಂದು ಕಂಪನಿ ಕಾರಣ ತಿಳಿಸಿದೆ. ಆದರೆ ಈ ಹಿಂದೆ ಕೇರಳದಲ್ಲಿ ಆಡಳಿತ ನಡೆಸಿದ್ದ LDF ಸರ್ಕಾರ ಈ ಯಂತ್ರಗಳನ್ನು ಖರೀದಿಸಿತ್ತು. ಈ ವೇಳೆ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬರುತ್ತಿದೆ. ಅಲ್ಲದೆ KSRTC ಯಂತ್ರ ಖರೀದಿಯ ಗುತ್ತಿಗೆಯನ್ನು ಸಾರ್ವಜನಿಕ ಕಂಪನಿಗೆ ನೀಡದೆ ಖಾಸಗಿ ಕಂಪನಿಗೆ ನೀಡಿ ಗೋಲ್‌ಮಾಲ್ ನಡೆಸಿದೆ ಎಂಬ ಮಾತು ಸದ್ದು ಮಾಡುತ್ತಿದೆ. ಇದನ್ನೂ ಓದಿ: ಸೂಪರ್ ಮಾರ್ಕೆಟ್‍ನಲ್ಲಿ ವೈನ್‍ಸ್ಟೋರ್ – ಮಹಾರಾಷ್ಟ್ರ ಸರ್ಕಾರದಿಂದ ಅನುಮತಿ

Share This Article
Leave a Comment

Leave a Reply

Your email address will not be published. Required fields are marked *