ಮೂರು ದಿನದಿಂದ ರಸ್ತೆ ಮಧ್ಯದಲ್ಲೇ ಕೆಟ್ಟು ನಿಂತ ಬಸ್ – ವಾಹನ ಸವಾರರ ಪರದಾಟ

Public TV
1 Min Read

ಮಡಿಕೇರಿ: ಸಾರಿಗೆ ಬಸ್ ಕಳೆದ ಮೂರು ದಿನಗಳ ಹಿಂದೆ ರಸ್ತೆ ಮಧ್ಯದಲ್ಲೇ ಕೆಟ್ಟು ನಿಂತರೂ ಇದುವರೆಗೂ ಅದನ್ನು ತೆರವುಗೊಳ್ಳಿಸದ ಕಾರಣ ವಾಹನ ಸವಾರರು ಪರದಾಟ ನಡೆಸುತ್ತಿದ್ದಾರೆ.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ-ಹೊನ್ನವಳ್ಳಿಗೆ ಹೋಗುವ ರಾಜ್ಯ ಹೆದ್ದಾರಿಯ ತಿರುವಿನಲ್ಲಿ ಕೆಎಸ್‍ಆರ್ ಟಿಸಿ ಬಸ್ ಮೂರು ದಿನಗಳ ಹಿಂದೆಯೇ ಕೆಟ್ಟು ನಿಂತಿದೆ. ಪರಿಣಾಮ ವಾಹನ ಸವಾರರು ಹಾಗೂ ಬಸ್ ಸಂಚಾರ ಮಾಡುವಲ್ಲಿ ತೊಂದರೆಯಾಗುತ್ತಿದೆ. ಇದನ್ನೂ ಓದಿ:ರಸ್ತೆ ಬಿಟ್ಟು ಮನೆ ಛಾವಣಿ ಹತ್ತಿ ನಿಂತ ಆಟೋ!

ಬೆಂಗಳೂರು ಡಿಪೋಗೆ ಸೇರಿದ ಕೆಎ 57 ಎಫ್ 4434 ನಂಬರಿನ ಬಸ್ ಇದಾಗಿದೆ. ರಸ್ತೆ ಮಧ್ಯದಲ್ಲೇ ಅನಾಥವಾಗಿ ಬಸ್ ನಿಂತಿದ್ದು. ಅದಷ್ಟು ಬೇಗ ಇಲಾಖೆ ಅಧಿಕಾರಿಗಳು ಬಸ್ ನ್ನು ತೆರವುಗೋಳಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಕನಸು ಕಾಣುವ ಹಕ್ಕಿದೆ ಕಾಣಲಿ: ಕಾಂಗ್ರೆಸ್ಸಿಗರಿಗೆ ಸಚಿವ ಕೋಟ ಟಾಂಗ್

Share This Article
Leave a Comment

Leave a Reply

Your email address will not be published. Required fields are marked *