ಕೃಷ್ಣಾವತಾರಿ ಅಜೇಯ್ ರಾವ್ ಪೊಲೀಸ್‍ಗಿರಿ! – 27ನೇ ಚಿತ್ರದ ಫಸ್ಟ್ ಲುಕ್ ಪೋಸ್ಟರ್!

Public TV
1 Min Read

ಬೆಂಗಳೂರು: ಇಂದು ಕೃಷ್ಣ ಅಜೇಯ್ ರಾವ್ ಜನ್ಮ ದಿನ. ತಾಯಿಗೆ ತಕ್ಕ ಮಗ ಚಿತ್ರದ ಯಶಸ್ಸಿನ ಅಲೆಯಲ್ಲಿರುವ ಅವರ ಮುಂದಿನ ಚಿತ್ರದ ಬಗೆಗಿನ ವಿವರಗಳೂ ಈ ಸಂದರ್ಭದಲ್ಲಿಯೇ ಜಾಹೀರಾಗಿವೆ. ಗುರುದೇಶಪಾಂಡೆ ನಿರ್ಮಾಣದಲ್ಲಿ ಮೂಡಿ ಬರಲಿರೋ ಅಜೇಯ್ ರಾವ್ ಇಪ್ಪತ್ತೇಳನೇ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ.

ಈಗ ಬಿಡುಗಡೆಯಾಗಿರೋ ಫಸ್ಟ್ ಲುಕ್ ಪೋಸ್ಟರ್ ನಿಜಕ್ಕೂ ಆಕರ್ಷಕವಾಗಿದೆ. ಅಜೇಯ್ ರಾವ್ ಅರ್ಧ ಖಾಕಿ ಮತ್ತು ಮತ್ತರ್ಧ ಕೃಷ್ಣಾವತಾರದ ಗೆಟಪ್ಪಿನಲ್ಲಿರೋ ಈ ಪೋಸ್ಟರ್ ಅಭಿಮಾನಿಗಳನ್ನೂ ಖುಷಿಗೊಳಿಸಿದೆ. ಆದರೆ ಇದರ ಟೈಟಲ್ ಇನ್ನೂ ಬಿಡುಗಡೆಯಾಗಿಲ್ಲ.

ಇದು ಗುರುದೇಶಪಾಂಡೆ ಪ್ರೊಡಕ್ಷನ್ಸ್ ಬ್ಯಾನರಿನ ಎರಡನೇ ಚಿತ್ರ. ಇದನ್ನು ರಾಜ್ ವರ್ಧನ್ ಶಂಕರ್ ನಿರ್ದೇಶನ ಮಾಡಲಿದ್ದಾರೆ. ಜಡೇಶ್ ಕುಮಾರ್ ಜೊತೆ ಸೇರಿ ಗುರುದೇಶಪಾಂಡೆಯವರೇ ಕಥೆ ಚಿತ್ರಕಥೆಯನ್ನೂ ರಚಿಸಿದ್ದಾರೆ. ಆರೂರು ಸುಧಾಕರ್ ಛಾಯಾಗ್ರಾಹಕರಾಗಿಯೂ ಆಯ್ಕೆಯಾಗಿದ್ದಾರೆ. ಉಳಿಕೆ ತಾರಾಗಣ, ತಾಂತ್ರಿಕ ವರ್ಗದ ಮಾಹಿತಿ ಟೈಟಲ್ ಲಾಂಚ್ ವೇಳೆಗೆ ಜಾಹೀರಾಗಲಿದೆ.

ಆದಷ್ಟು ಬೇಗನೆ ಟೈಟಲ್ ಲಾಂಚ್ ಮಾಡಿ ಅದೇ ಸಂದರ್ಭದಲ್ಲಿ ಚಿತ್ರದ ಬಗೆಗಿನ ಉಳಿಕೆ ಮಾಹಿತಿ ಕೊಡುವ ಆಲೋಚನೆ ಗುರುದೇಶಪಾಂಡೆ ಅವರದ್ದು. ಅಂತೂ ಬೇಗನೆ ಈ ಚಿತ್ರದ ಚಿತ್ರೀಕರಣ ಚಾಲೂ ಆಗಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *