ವಾರ್ ಟೈಮ್ ವಾರಿಯರ್‌ಗೆ ಪೀಸ್ ಟೈಮ್ ಪೈನ್

Public TV
1 Min Read

ಬೆಂಗಳೂರು: ಇದು ರಾಜ್ಯ ಕಾಂಗ್ರೆಸ್ಸಿನ ಟ್ರಬಲ್ ಶೂಟರ್ ಡಿಕೆಶಿಯ ಪಾಲಿಗೆ ಎದುರಾದ ಇನ್ನೊಂದು ರೀತಿಯ ಸಂಕಷ್ಟ. ಇನ್ನೇನು ಡಿ.ಕೆ.ಶಿವಕುಮಾರ್ ಅವರಿಗೆ ಕೆಪಿಸಿಸಿ ಪಟ್ಟಾಭಿಷೇಕ ಆಗಿಯೇ ಬಿಟ್ಟಿತು ಎನ್ನಲಾಗುತ್ತಿತ್ತು. ಆದರೆ ಈಗ ಹೈಕಮಾಂಡ್ ಮಟ್ಟದಲ್ಲೇ ಭಿನ್ನರಾಗ ಶುರುವಾಗಿದೆ ಎನ್ನಲಾಗುತ್ತಿದೆ.

ಇನ್ನು ಚುನಾವಣೆಗೆ 3 ವರ್ಷವಿದೆ. ಇಂತಹ ರಾಜಕೀಯ ಪೀಸ್ ಟೈಮ್ ನಲ್ಲಿ ಡಿ.ಕೆ.ಶಿವಕುಮಾರ್ ಅವರಂತಹ ವಾರಿಯರ್ ಬೇಡ ಬೇರೆಯವರೇ ಇರಲಿ ಎನ್ನುವ ಮಾತು ಹೈಕಮಾಂಡ್ ವಲಯದಲ್ಲಿ ಚರ್ಚೆ ಆಗುತ್ತಿದೆ. ಒಂದೂವರೆ ವರ್ಷ ಕಳೆದ ನಂತರ ಮತ್ತೆ ನೋಡಿದರಾಯ್ತು ಸದ್ಯಕ್ಕೆ ಬೇರೆಯವರಿಗೆ ನೇತೃತ್ವ ಕೊಡಲಾಗುತ್ತದೆ ಎನ್ನುವುದು ದೆಹಲಿ ಅಂಗಳದ ಸ್ಟ್ರಾಂಗ್ ರೂಮರ್. ಈ ಬೆಳವಣಿಗೆಗೆ ಕಾರಣವಾಗಿರುವುದು ಡಿಕೆಶಿಗಿರುವ ಸಿಬಿಐ ಭಯ ಎನ್ನುವ ಮಾತು ಕೇಳಿ ಬರುತ್ತಿದೆ.

ಯಾವುದಕ್ಕೂ ರಿಸ್ಕ್ ತೆಗೆದುಕೊಳ್ಳುವುದು ಬೇಡ ಎಂದು ರಾಜ್ಯ ಕಾಂಗ್ರೆಸ್ಸಿನ ಬಹುತೇಕ ನಾಯಕರು ಹೈಕಮಾಂಡ್ ಬಳಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ. ಇದರಿಂದ ಗೊಂದಲಕ್ಕೆ ಬಿದ್ದ ಹೈ ಕಮಾಂಡ್ ಪೀಸ್ ಟೈಮ್, ವಾರ್ ಟೈಮ್ ಸೂತ್ರ ಬಳಸಬಹುದು ಎನ್ನಲಾಗುತ್ತಿದೆ.

ಹಾಗೇನಾದರು ಪೀಸ್ ಟೈಮ್ ನಲ್ಲಿ ವಾರಿಯರ್ ಪಟ್ಟಾಭಿಷೇಕ ಬೇಡ ಎಂಬ ತೀರ್ಮಾನವಾದರೆ ಡಿಕೆಶಿ ಪಟ್ಟಾಭಿಷೇಕ ಸದ್ಯಕ್ಕಿಲ್ಲ ಎನ್ನುವುದು ಪಕ್ಕಾ. ಇವೆಲ್ಲವನ್ನು ಮೀರಿ ಡಿಕೆಶಿಗೆ ಪಟ್ಟಾಭಿಷೇಕ ಅನಿವಾರ್ಯ ಎನ್ನುವ ತೀರ್ಮಾನಕ್ಕೆ ಹೈಕಮಾಂಡ್ ಬಂದರಷ್ಟೇ ಡಿಕೆಶಿಗೆ ಅವಕಾಶ. ಇಲ್ಲದಿದ್ದರೆ ಪೀಸ್ ಟೈಮ್ ಫಾರ್ಮುಲವೇ ಡಿಕೆಶಿ ಪಾಲಿಗೆ ಮುಳ್ಳಾಗುವ ಸಾಧ್ಯತೆಯಿದೆ.

Share This Article
Leave a Comment

Leave a Reply

Your email address will not be published. Required fields are marked *